Advertisement

ಕೊರಿಯರ್‌ನಲ್ಲಿ ಬಂದಿದ್ದ ದ್ರಾವಣ ಸೇವಿಸಿ ಸಾವು

11:31 PM Aug 05, 2019 | Team Udayavani |

ಸೋಮವಾರಪೇಟೆ: ಕೊರಿಯರ್‌ನಲ್ಲಿ ಬಂದಿದ್ದ ದ್ರಾವಣ ಸೇವಿಸಿ ಪಟ್ಟಣದ ಕಣಾರ ಹೊಟೇಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸುರೇಶ್‌ (38) ಎಂಬುವ ರು ತಣ್ಣೀರುಹಳ್ಳ ಗ್ರಾಮದಲ್ಲಿ ಸಾವಿಗೀಡಾಗಿದ್ದಾರೆ. ಭಾನುವಾರ ಹೊಟೇಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಸುರೇಶ್‌ ಹೆಸರಿಗೆ ಕೊರಿಯರ್‌ನಲ್ಲಿ ಪಾರ್ಸಲ್‌ ಬಂದಿತ್ತು.

Advertisement

ಅದನ್ನು ಮನೆಗೆ ತಂದ ಪತಿ, ಕಾಸರಗೋಡು ವಿಷ್ಣುಮೂರ್ತಿ ಮಂತ್ರ ದೇವಾಲಯದಿಂದ ತೀರ್ಥ ಬಂದಿದ್ದು, ಅದನ್ನು ಸೇವಿಸುವುದಾಗಿ ತಿಳಿಸಿ ಮಲಗಿದ್ದರು. ಕೆಲ ನಿಮಿಷಗಳ ಬಳಿಕ ನೋಡಿದಾಗ ಮೃತಪಟ್ಟಿದ್ದರು ಎಂದು ಪತ್ನಿ ರಾಧಾ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಶವಪರೀಕ್ಷೆ ನಡೆದು, ಶರೀರದ ಅಂಗಾಂಗಗಳನ್ನು ಎಫ್ಎಸ್‌ಎಲ್‌. ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ಕೊಲೆ ಮಾಡಿದರೇ?: ಕೊಲೆ ಮಾಡುವ ಉದ್ದೇಶದಿಂದ ಯಾರಾದರೂ ಕೊರಿಯರ್‌ ಮೂಲಕ ಕಳುಹಿಸಿರಬಹುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next