Advertisement
ಅಪಾಯದಲ್ಲಿ ಕಿರು ಸೇತುವೆಸುಮಾರು 40 ವರ್ಷ ಹಿಂದೆ ನಿರ್ಮಾಣ ಗೊಂಡಿರುವ ಸೇತುವೆ ಸುತ್ತಮುತ್ತಲ ಪ್ರದೇಶದಲ್ಲಿ ಬೇಸಗೆಯಲ್ಲಿ ಹಿತಾಚಿ ಯಂತ್ರಗಳನ್ನು ಬಳಸಿ ಅವ್ಯಾಹತವಾಗಿ ಮರಳುಗಾರಿಕೆ ನಡೆಸುವ ಪರಿಣಾಮ ಸೇತುವೆ ಮುರಿದು ಅಪಾಯದ ಮಟ್ಟವನ್ನು ತಲುಪಲು ಕಾರಣವಾಗಿದೆ. ಮಳೆಗಾಲದಲ್ಲಿ ನೀರಿನ ಒಳಹರಿವಿನ ತೀವ್ರತೆ ಹೆಚ್ಚಾಗಿರುವುದರಿಂದ ಈಗಾಗಲೇ ಸೇತುವೆ ಮಧ್ಯ ಭಾಗ ಮುರಿದು ಹೋಗಿದ್ದು ಯಾವ ಕ್ಷಣದಲ್ಲಿಯೂ ಅಪಾಯ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಹಿರಿಯ ಕೃಷಿಕ ಸದಾಶಿವ ಶೆಟ್ಟಿ ಅವರು ತೀವ್ರಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೇಳೂರು ಗ್ರಾಮದಿಂದ ಅಚ್ಲಾಡಿ ಗ್ರಾಮಗಳಿಗೆ ಪ್ರಮುಖ ಸಂಪರ್ಕ ಸೇತುವಿನಿಂದಾಗಿ ಎರಡು ಗ್ರಾಮಗಳಿಗೆ ಸುಮಾರು 2 ಕಿ.ಮೀ. ಸಮೀಪದ ಅಂತರದಲ್ಲಿ ಸಂಧಿಸಬಹುದು. ಇಲ್ಲದಿದ್ದಲ್ಲಿ ಸುಮಾರು 8 ಕಿ.ಮೀ. ಸುತ್ತುವರಿದು ದೂರ ಕ್ರಮಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರದ್ದು. ಸೇತುವೆ ಮೇಲ್ದರ್ಜೆ ಅಗತ್ಯ
ಮುಂದಿನ ದಿನಗಳಲ್ಲಿ ವೈಜ್ಞಾನಿಕವಾಗಿ ಈ ಕಿರು ಸೇತುವೆ ಮೇಲ್ದರ್ಜೆ ಏರಿಸಿ ವ್ಯವಸ್ಥಿತವಾದ ರಸ್ತೆ ನಿರ್ಮಾಣವಾದರೆ ಬೇಳೂರು -ಅಚ್ಲಾಡಿ ಗ್ರಾಮಗಳ ನಡುವೆ ಸಂಪರ್ಕ ವೃದ್ಧಿಯಾಗಿ ಇಲ್ಲಿನ ನೂರಾರು ಕೃಷಿಕರು, ಹೈನುಗಾರರು ಮಾತ್ರವಲ್ಲದೆ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗುವುದು ಮಾತ್ರ ವಾಸ್ತವ ಸತ್ಯ.
Related Articles
ಹಲವು ದಶಕಗಳ ಕನಸಾಗಿರುವ ಪ್ರಮುಖ ಸಂಪರ್ಕ ರಸ್ತೆ ಕಲ್ಪಿಸುವ ಬಗ್ಗೆ ಸಾರ್ವಜನಿಕರಿಂದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ್ದಾರೆ .ಶಿಥಿಲಗೊಂಡ ಈ ಸೇತುವೆಯ ಮೇಲೆ ಗ್ರಾಮಸ್ಥರು ಅಪಾಯದ ನಡುವೆ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಮಳೆಗಾಲದಲ್ಲಿ ಸಂಭವನೀಯ ಅವಘಡಗಳು ಸಂಭವಿಸುವ ಮೊದಲು ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ.
– ಮಧುಕರ ಶೆಟ್ಟಿ ಬೇಳೂರು,
ಸಾಮಾಜಿಕ ಕಾರ್ಯಕರ್ತರು
Advertisement
ಸೇತುವೆ ಮಧ್ಯದಲ್ಲಿ ಬಿರುಕು ಅತ್ಯಂತ ನೇರವಾಗಿ ನಿರ್ಮಾಣವಾಗಿದ್ದ ಈ ಕಿರು ಸೇತುವೆ ಪ್ರಸ್ತುತ ಮುರಿದು ಹೋಗಿ ಅಪಾಯದ ಮಟ್ಟವನ್ನು ತಲುಪಿದೆ. ಸೇತುವೆ ಮಧ್ಯದಲ್ಲಿ ಬಿರುಕು ಬಿಟ್ಟಿದ್ದು ಸಂಪೂರ್ಣ ಶಿಥಿಲಗೊಂಡಿದೆ. ಈ ನಡುವೆ ಗ್ರಾಮಸ್ಥರು ಅಪಾಯದ ತೀವ್ರತೆ ಅರಿಯದೆ ನಿತ್ಯ ಸಂಚಾರ ನಡೆಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಸ್ಥಳೀಯಾಡಳಿತ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಖೇದಕರ.
– ರವಿಕುಮಾರ್ ಶೆಟ್ಟಿ, ಅಧ್ಯಕ್ಷರು, ಹಿಂದೂ ಯುವಸೇನೆ ಬೇಳೂರು