Advertisement

Bangladesh ಅಕ್ರಮ ವಲಸಿಗರ ಆಧಾರ್‌ ನಿಷ್ಕ್ರಿಯಗೊಳಿಸಿ: ಪ್ರಾಧಿಕಾರಕ್ಕೆ ಸೇನೆ ಮನವಿ

01:13 AM Sep 30, 2024 | Team Udayavani |

ಹೊಸದಿಲ್ಲಿ: ದಾಖಲೆರಹಿತ ವಲಸಿಗರ ಆಧಾರ್‌ ನೋಂದಣಿ ನಿಷ್ಕ್ರಿಯಗೊಳಿಸುವಂತೆ ಗಡಿ ಭದ್ರತಾ ಪಡೆ(BSF) ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI)ಕ್ಕೆ ಮನವಿ ಮಾಡಿದೆ. ಗಡಿಯಲ್ಲಿ ಶಂಕಿತನೊಬ್ಬನನ್ನು ವಶಕ್ಕೆ ಪಡೆದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ ಬಿಎಸ್‌ಎಫ್, ಯುಐಡಿಎಐಗೂ ಪತ್ರ ಬರೆದಿದೆ. ಅದರಲ್ಲೂ ಅಕ್ರಮವಾಗಿ ದೇಶವನ್ನು ಪ್ರವೇಶಿಸುವಾಗ ಅಥವಾ ಹೊರಹೋಗುವಾಗ ಗಡಿಯಲ್ಲಿ ಬಂಧಿಸಲ್ಪಟ್ಟ ಶಂಕಿತ ಬಾಂಗ್ಲಾದೇಶಿಗಳ ಆಧಾರ್‌ ಗುರುತನ್ನು ರದ್ದುಗೊಳಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಮೇಯಲ್ಲಿ ಬಾಂಗ್ಲಾ ನಾಗರಿಕನನ್ನು ಬಂಧಿಸಲಾಗಿತ್ತು. ಚೆನ್ನೈಯಲ್ಲಿ 9 ವರ್ಷಗಳಿಂದ ನೆಲೆಸಿದ್ದ ಆತನ ಆಧಾರ್‌ ನಿಷ್ಕ್ರಿಯಗೊಳಿಸಲು ಮನವಿ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next