Advertisement

6ರಿಂದ 9ನೇ ತರಗತಿ ನಡೆಸಿದರೆ ಕ್ರಮ

01:57 PM Apr 07, 2021 | Team Udayavani |

ಕೋಲಾರ: ಕೋವಿಡ್‌-19 ಸರ್ಕಾರದ ಹೊಸಮಾರ್ಗಸೂಚಿಗಳನ್ನು ಕಡ್ಡಾಯವಾಗಿಪಾಲಿಸಬೇಕು.6ರಿಂದ 9ನೇ ತರಗತಿಯನ್ನುಭೌತಿಕವಾಗಿ ನಡೆಸಿದರೆ, ಶಿಸ್ತು ಕ್ರಮಜರುಗಿಸಬೇಕಾಗುತ್ತದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ಎಚ್ಚರಿಕೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ನಗರದ ಮಹಿಳಾ ಸಮಾಜ ಶಾಲೆಯ ಸದಾಶಿವಸ್ಮಾರಕ ಭವನದಲ್ಲಿ ನಡೆದ ತಾಲೂಕಿನ ಖಾಸಗಿಪ್ರಾಥಮಿಕ, ಪ್ರೌಢಶಾಲೆಗಳ ಮುಖ್ಯಶಿಕ್ಷಕರುಹಾಗೂ ಆಡಳಿತ ಮಂಡಳಿಗಳ ಸಭೆಯಲ್ಲಿಮಾತನಾಡಿ, ಕೋವಿಡ್‌ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ಎಲ್ಲಾ ಶಾಲೆಗಳುಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಈಗಾಗಲೇ 6 ರಿಂದ 9ನೇ ತರಗತಿಗಳಿಗೆ ಭೌತಿಕ ತರಗತಿ ನಡೆಸಬಾರದು ಎಂದುಸುತ್ತೋಲೆ ಹೊರಡಿಸಲಾಗಿದೆ. ಇದರನಡುವೆಯೂ ಖಾಸಗಿ ಶಾಲೆಗಳವರು ತರಗತಿನಡೆಸುವುದು ಕಂಡು ಬಂದರೆ ಕಠಿಣ ಕ್ರಮಕೈಗೊಳ್ಳುವುದಾಗಿಯೂ ತಿಳಿಸಿದ ಅವರು,ಪರೀಕ್ಷೆ ನಡೆಸಬೇಕೆ ಬೇಡವೇ ಎಂಬುದರಕುರಿತು ಸರ್ಕಾರದ ಆದೇಶದಂತೆ ಕ್ರಮವಹಿಸಲು ಸೂಚಿಸಿದರು.

ಶೇ.70ರಷ್ಟು ಶುಲ್ಕ ವಸೂಲಿ: ಖಾಸಗಿಶಾಲೆಗಳಲ್ಲಿ ಶೇ.70ರಷ್ಟು ಶುಲ್ಕ ವಸೂಲಿಮಾಡಬೇಕು ಎಂದು ಸರ್ಕಾರ ಆದೇಶೀಸಿದೆ.ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವಕುರಿತು ಪೋಷಕರಿಂದ ದೂರು ಬಂದರೆಆಡಳಿತ ಮಂಡಳಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.

ಆರ್‌ಟಿಇ ಶುಲ್ಕ ಮರುಪಾವತಿ ಕುರಿತುಒಂದೆರಡು ದಿನಗಳೊಳಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ ಅವರು, ಎಲ್ಲಾಶಾಲೆಗಳಲ್ಲೂ ಜೂನಿಯರ್‌ ರೆಡ್‌ಕ್ರಾಸ್‌ ಸ್ಥಾಪನೆಗೆ ಸೂಚಿಸಿದರು.

Advertisement

ಶಾಲೆ ಉಳಿಸಿಕೊಳ್ಳುವ ಪ್ರಯತ್ನ: ಕಾಮ್ಸ್‌ಕೋಲಾರ ಜಿಲ್ಲಾಧ್ಯಕ್ಷ ಎ.ಸದಾನಂದಮಾತನಾಡಿ, ಶಿಕ್ಷಣ ಸಂಸ್ಥೆಗಳು ಇಲಾಖೆಯಆದೇಶಗಳನ್ನು ಪಾಲಿಸುತ್ತವೆ.ಪೋಷಕರೊಂದಿಗೂ ಉತ್ತಮ ಬಾಂಧವ್ಯಹೊಂದಿವೆ. ಆದರೆ, ಶಾಲೆಯನ್ನುಉಳಿಸಿಕೊಳ್ಳುವ ಪ್ರಯತ್ನವನ್ನು ನಾವಿಂದುಮಾಡಬೇಕಾಗಿದೆ. ಸರ್ಕಾರ ನಿಗ ಪಡಿಸಿದಶೇ.70ರಷ್ಟು ಶುಲ್ಕ ಮಾತ್ರ ವಸೂಲಿಮಾಡಬೇಕುಎಂಬುದನ್ನು ಒಪ್ಪಿಕೊಂಡಿದ್ದೇವೆ.ಅದರಂತೆಯೇ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕಟ್ಟುನಿಟ್ಟಿನ ಆದೇಶ ನೀಡಿ: ಕಾಮ್ಸ್‌ ಕೋಲಾರತಾಲೂಕು ಅಧ್ಯಕ್ಷ ಲಕ್ಷ್ಮೀನಾರಾಯಣಮಾತನಾಡಿ, ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಕಷ್ಟ ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ,ಸರ್ಕಾರ ನಿಗ ಗೊಳಿಸಿದ ಶೇ.70 ಶುಲ್ಕವನ್ನುಅನೇಕ ಪೋಷಕರು ಪಾವತಿಸುತ್ತಿಲ್ಲ. ಇದರ ವಸೂಲಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ,ನಮ್ಮ ಶಾಲೆಗಳನ್ನು ಉಳಿಸಿ ಎಂದು ಕೋರಿದರು.

ಸಭೆಯಲ್ಲಿ ಖಾಸಗಿ ಶಾಲೆಗಳ ಸಂಘದ ಬಸವೇಶ್ವರ ಜಗದೀಶ್‌, ಕಾಡುಗುರು ನಾಗಭೂಷಣ್‌, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ರಾಘವೇಂದ್ರ, ಆರ್‌.ಶ್ರೀನಿವಾಸನ್‌, ಬಿಆರ್‌ಪಿ ನಾಗರಾಜ್‌ ಮತ್ತಿತರರಿದ್ದರು.

ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ :

ಮಕ್ಕಳ ಸುರಕ್ಷತೆಗೆ ಒತ್ತು ನೀಡಬೇಕು. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೆ„ಸರ್‌ಕಡ್ಡಾಯವಾಗಿ ಬಳಸಿ, ಎಲ್ಲಾ ಶಿಕ್ಷಕರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು. ಶಾಲೆಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಕೊಠಡಿಗಳ ಸ್ಯಾನಿಟೈಸರ್‌ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next