Advertisement

ಅಂಬೇಡ್ಕರ್ ಸಂವಿಧಾನ ಬರೆದಿರಬಹುದು, ಆದರೆ ಅವರ ಮೊಮ್ಮಗ ಸಂವಿಧಾನ ತಜ್ಞ ಅಲ್ಲ: ಕಾರಜೋಳ

10:02 AM Jan 19, 2020 | keerthan |

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್ ನಡವಳಿಕೆ ಆಶ್ಚರ್ಯ ಆಗಿದೆ, ನೆಹರೂ, ಇಂದಿರಾ ಗಾಂಧಿ, ರಾಜೀವ ಗಾಂಧಿ ಕಾಲದಲ್ಲಿಯೂ ಈ ಕಾಯ್ದೆ ಬಗ್ಗೆ ಚರ್ಚೆ ಆಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ವಾಜಪೇಯಿ ಕಾಲದಲ್ಲಿಯೂ ತಿದ್ದುಪಡಿ ಬಗ್ಗೆ ಚರ್ಚೆ ಆಗಿತ್ತು. ಆದರೆ ಪಾಸ್ ಆಗಿರಲಿಲ್ಲ, ಮನಮೋಹನ್ ಸಿಂಗ್ ಕಾಲದಲ್ಲಿಯೂ ಚರ್ಚೆ ಆದಾಗಲೂ ವಿರೋಧ ಮಾಡಿಲ್ಲ. ಇವತ್ತು ನರೇಂದ್ರ ಮೋದಿ, ಅಮಿತ್ ಶಾ ಕಾಲದಲ್ಲಿ ಕಾಯಿದೆ ಪಾಸ್ ಆಗಿದೆ. ಲೋಕಸಭೆಯಲ್ಲೇ ವಿರೋಧ ಆಗಿಲ್ಲ, ಪೌರತ್ವ ಬೇಡ ದೇಶ ಬೇಕು ಅಂದರೆ ಹೇಗೆ ಎಂದರು.

ಇನ್ನು ಪೌರತ್ವವೂ ಬೇಕು ದೇಶವೂ ಬೇಕು ಎಂದ ಅವರು, ಇಂದಿರಾ ಗಾಂಧಿ ಕಾಲದ ಬಾಂಗ್ಲಾ ನಿರಾಶ್ರಿತರು ದೇಶದಲ್ಲಿ ಇದ್ದಾರೆ. ಕಾಂಗ್ರೆಸ್‌ ನವರು ಯಾಕೆ ವಿರೋಧ ಮಾಡುತ್ತೇವೆ ಅಂತಾ ಹೇಳುತ್ತಿಲ್ಲ, ವೋಟ್ ಬ್ಯಾಂಕ್ ಕಳೆದು ಹೋಗುವ ಆತಂಕಕ್ಕೆ ಕಾಂಗ್ರೆಸ್ ಕಾಯ್ದೆಯನ್ನು ವಿರೋಧ ಮಾಡುತ್ತಿದೆ ಎಂದರು.

ಇನ್ನು ಡಾ. ಅಂಬೇಡ್ಕರ್ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಅವರು ಸಿಎಎಗೆ ವಿರೋಧ ತೋರಿರುವ ವಿಚಾರವಾಗಿ ಮಾತನಾಡಿ, ಅವರು ಸಂವಿಧಾನ ಬರೆದವರ ಮೊಮ್ಮಗ ಇರಬಹುದು, ಆದ್ರೆ ಅವರು ಸಂವಿಧಾನ ತಜ್ಞ ಅಲ್ಲ ಎಂದರು.

ನಂತರ ಹುಬ್ಬಳ್ಳಿಯಲ್ಲಿ ಅಮಿತ ಶಾ ಜೊತೆ ಸಚಿವ ಸಂಪುಟ ವಿಸ್ತರಣೆ ಚರ್ಚೆ ವಿಚಾರವಾಗಿ ಮಾತನಾಡಿ, ಸಚಿವ ಸಂಪುಟದ ಬಗ್ಗೆ ಚರ್ಚೆ ಆಗುತ್ತದೆ ಇಲ್ಲವೋ ಗೊತ್ತಿಲ್ಲ, ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಅವರು, ನಮ್ಮ ನಾಯಕ ಯಡಿಯೂರಪ್ಪನವರಿಗೆ ಅವಕಾಶ ಕೊಟ್ಟರೇ ಚರ್ಚೆ ಆಗುತ್ತದೆ ಎಂದರು.

Advertisement

ಯತ್ನಾಳ ಮತ್ತು ನಿರಾಣಿ ಮಧ್ಯದ ಮುಸುಕಿನ ಗುದ್ದಾಟ ವಿಚಾರವಾಗಿ ನೋ ಕಮೆಂಟ್ ಅಂತಾ ಪ್ರತಿಕ್ರಿಯಿಸಿದ ಕಾರಜೋಳ, ಯಾವ ಉದ್ದೇಶಕ್ಕೆ ಯತ್ನಾಳ ಹಾಗೆ ಹೇಳಿದ್ದಾರೆ ಎನ್ನುವುದನ್ನು ಯತ್ನಾಳ ಅವರನ್ನೇ ಕೇಳಿ ಎಂದರು

Advertisement

Udayavani is now on Telegram. Click here to join our channel and stay updated with the latest news.

Next