Advertisement

ಶಾಸಕರ ಕಾಲಿಗೆ ಬಿದ್ದು ನಮಸ್ಕರಿಸಿದ ಡಿಸಿಎಂ

11:38 PM Aug 31, 2019 | Lakshmi GovindaRaj |

ಬಾಗಲಕೋಟೆ: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಬಾಗಲಕೋಟೆ ಶಾಸಕ ಡಾ|ವೀರಣ್ಣ ಚರಂತಿಮಠ ಅವರ ಕಾಲಿಗೆ ನಮಸ್ಕರಿಸಿ, ನಿಮ್ಮ ಆಶೀರ್ವಾದ ಇರಲೆಂದು ಕೇಳಿಕೊಂಡ ಪ್ರಸಂಗ ಶನಿವಾರ ನಡೆಯಿತು.

Advertisement

ಖಾತೆ ಹಂಚಿಕೆ ಹಾಗೂ ಉಪ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತ ಸಭೆ ನಡೆಸಲು ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ್ದ ಅವರಿಗೆ ಶಾಸಕ ಡಾ|ಚರಂತಿಮಠ ಹೂಗುತ್ಛ ನೀಡಿ ಸ್ವಾಗತಿಸಿದರು.

ಈ ವೇಳೆ, ಕಾರಜೋಳರು ತಮ್ಮ ಕಾಲಲ್ಲಿದ್ದ ಚಪ್ಪಲಿ ಬಿಟ್ಟು ಚರಂತಿಮಠರ ಕಾಲಿಗೆ ನಮಸ್ಕರಿಸಿದರು. “ಇದು ಡೀಸಿ ಆಫೀಸ್‌. ಬ್ಯಾಡ್ರಿ’ ಅಂದ್ರು. “ನೀವು ಸ್ವಾಮಿಗಳು, ನಿಮ್ಮ ಆಶೀರ್ವಾದ ನಮಗೆ ಇರಬೇಕು’ ಎಂದು ನಗುತ್ತಲೇ ಕಾಲಿಗೆರಗಿದರು.

2ನೇ ಬಾರಿಯೂ ಪ್ರತಿಭಟನೆ ಸ್ವಾಗತ: ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಖಾತೆ ರಹಿತ ಸಚಿವರಾಗಿದ್ದ ಕಾರಜೋಳರು, ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ್ದಾಗ ರೈತರು ಪ್ರತಿಭಟನೆ ಮೂಲಕವೇ ಸ್ವಾಗತಿಸಿದ್ದರು. ಉಪಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಡೀಸಿ ಕಚೇರಿಗೆ ಬಂದಾಗಲೂ ರೈತರು ಹಾಗೂ ಕರವೇ ಕಾರ್ಯಕರ್ತರು ಪ್ರತ್ಯೇಕ ಪ್ರತಿಭಟನೆ ನಡೆಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next