Advertisement

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

01:24 AM Apr 30, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಮುಂದಿನ ಅವಧಿಯಲ್ಲಿ ಚುನಾವಣ ಪ್ರಕ್ರಿಯೆಗಳಿಗಾಗಿ ನಿಯೋಜಿತಗೊಂಡ ವಿವಿಧ ತಂಡಗಳ ಕಾರ್ಯಭಾರ ಕುರಿತು ನಗರದ ಜಿಲ್ಲಾಧಿ ಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿ ಕಾರಿ ಮುಲ್ಲೈ ಮುಗಿಲನ್‌ ಎಂ. ಪಿ. ಅವರ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಯಿತು.

Advertisement

ಮಾದರಿ ನೀತಿ ಸಂಹಿತೆಯನ್ನು ಪಾಲಿಸಲು ರಚಿಸಲಾಗಿರುವ ಚೆಕ್‌ಪೋಸ್ಟ್‌ಗಳಾದ ಈಶ್ವರ ಮಂಗಲ, ತಲಪಾಡಿ ಹಾಗೂ ಬಂಟ್ವಾಳದ ಆನೆಕಲ್ಲಿನ ಚೆಕ್‌ಪೋಸ್ಟ್‌ಗಳು ಮುಂದೆಯೂ ಕಟ್ಟೆಚ್ಚರದಲ್ಲಿ ಕಾರ್ಯನಿರ್ವಹಿಸಬೇಕು. ಉಳಿದಂತೆ ವಿಧಾನಸಭಾ ಕ್ಷೇತ್ರವಾರು ರಚನೆಯಾಗಿರುವ ಫ್ಲೈಯಿಂಗ್ ಸ್ಕ್ವಾಡ್ ತಂಡವೊಂದು ಪೂರ್ಣ ಅವಧಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಜಿ. ಪಂ. ಸಿಇಒ, ಮಾದರಿ ನೀತಿ ಸಂಹಿತೆ ನೋಡಲ್‌ ಅಧಿಕಾರಿ ಡಾ| ಆನಂದ್‌ ಕೆ., ಅಪರ ಡಿಸಿ ಡಾ| ಸಂತೋಷ್‌ ಕುಮಾರ್‌ ಜಿ. ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next