Advertisement

ಪ್ರೇಮಿಗಳ ದಿನದಂದೇ ಡೀಸಿ, ಸಿಇಒ ವಿವಾಹ

01:36 AM Feb 03, 2019 | |

ದಾವಣಗೆರೆ: ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಲ್ಲಾ ಪಂಚಾಯತ್‌ ಸಿಇಒ ಎಸ್‌. ಅಶ್ವತಿ ಅವರು ಫೆ. 14ರ ಪ್ರೇಮಿಗಳ ದಿನದಂದು ಕೇರಳದ ಕಲ್ಲಿಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೂಲತಃ ಆಂಧ್ರ ಪ್ರದೇಶದ ವಿಶಾಖಪಟ್ಟಣಂ (ವೈಜಾಗ್‌)ನ ಡಾ| ಬಗಾದಿ ಗೌತಮ್‌ ಕಾಕಿನಾಡಿನ ರಂಗರಾಯ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ಪದವಿ ನಂತರ ಭಾರತ ಸೇವಾ ಆಯೋಗದ ಪರೀಕ್ಷೆ ಬರೆದವರು. 2009ನೇ ಬ್ಯಾಚ್ ಐಎಎಸ್‌ ಅಧಿಕಾರಿ ಯಾಗಿರುವ ಅವರು ಬೆಳಗಾವಿ ಜಿ.ಪಂ. ಸಿಇಒ, ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ 4 ತಿಂಗಳ ಹಿಂದೆ ದಾವಣಗೆರೆ ಡೀಸಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

ಕೇರಳದ ಕಲ್ಲಿಕೋಟೆಯ ನಿವಾಸಿ ಎಸ್‌. ಅಶ್ವತಿ 2013ನೇ ಸಾಲಿನ ಐಎಎಸ್‌ ಅಧಿಕಾರಿ. ಮಣಿಪಾಲದಲ್ಲಿ ಎಂಬಿಎ ಮುಗಿಸಿದ ನಂತರ ಐಎಎಸ್‌ ಪರೀಕ್ಷೆ ಬರೆದಿದ್ದರು. ಡಾ| ಬಗಾದಿ ಗೌತಮ್‌ ಮತ್ತು ಎಸ್‌. ಅಶ್ವತಿ ಅವರದ್ದು ನಾಲ್ಕು ವರ್ಷದ ಗೆಳೆತನ. ಈಗ ಪ್ರೇಮಿಗಳ ದಿನದಂದೇ ಇಬ್ಬರೂ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಫೆ. 14 ರ ಗುರುವಾರ ಬೆಳಗ್ಗೆ 10ಕ್ಕೆ ಎಸ್‌.ಅಶ್ವತಿಯವರ ತವರೂರು ಕಲ್ಲಿಕೋಟೆಯ ಟ್ಯಾಗೋರ್‌ ಹಾಲ್‌ನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. ಫೆ. 17 ರಂದು ವಿಶಾಖಪಟ್ಟಣಂನ ಪಾರ್ಕ್‌ ಹೋಟೆಲ್‌ನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next