Advertisement

ಗುರು-ಶಿಷ್ಯನ ಜೊತೆಗೆ ದಯಾಳ್‌

11:18 AM Jun 06, 2018 | Team Udayavani |

ಆ ವೇದಿಕೆಯ ವಿಶೇಷ ಎಂದರೆ ಅಲ್ಲಿ ದಯಾಳ್‌ ಅವರ ಗುರು ಮತ್ತು ಶಿಷ್ಯ ಇಬ್ಬರೂ ಇದ್ದಿದ್ದು. ದಯಾಳ್‌ ಗುರು ಯಾರು ಎಂದರೆ, ಅದು ಉಪೇಂದ್ರ. ಈ ಹಿಂದೆ ಉಪೇಂದ್ರ ಅವರು “ಎಚ್‌ಟುಓ’ ಚಿತ್ರ ಮಾಡಿದಾಗ, ತಮಿಳು ಸಂಭಾಷಣೆಗಳಲ್ಲಿ ದಯಾಳ್‌ ಅವರ ಸಹಾಯ ಪಡೆದಿದ್ದರಂತೆ.

Advertisement

ಆ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದಯಾಳ್‌, ಈಗಲೂ ಉಪೇಂದ್ರ ಅವರನ್ನು ತಮ್ಮ ಗುರುಗಳು ಎಂದೇ ಭಾವಿಸಿದ್ದಾರೆ. ಇನ್ನು ದಯಾಳ್‌ ಅವರ ಶಿಷ್ಯ ಯಾರೆಂದರೆ ಅದು ಆರ್‌. ಚಂದ್ರು. ಎಸ್‌. ನಾರಾಯಣ್‌ ಅವರ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದ ಚಂದ್ರು, ಚಿತ್ರ ತಯಾರಿಕೆಯ ಪಟ್ಟು ಕಲಿಯಬೇಕು ಎಂದು ಹೋಗಿದ್ದು ದಯಾಳ್‌ ಬಳಿಗಂತೆ.

ದಯಾಳ್‌ ನಿರ್ದೇಶದ “ಸಖ-ಸಖಿ’ ಚಿತ್ರದಲ್ಲಿ ಕೆಲಸ ಮಾಡಿದ ಚಂದ್ರು ಆ ನಂತರ “ತಾಜ್‌ ಮಹಲ್‌’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. ಹಾಗಾಗಿ ಉಪೇಂದ್ರರನ್ನು ತಮ್ಮ ಗುರುಗಳು ಎಂದು ದಯಾಳ್‌ ಭಾವಿಸಿದರೆ, ದಯಾಳ್‌ ಅವರು ತಮ್ಮ ಗುರುಗಳು ಎಂದು ಚಂದ್ರು ನಂಬಿದ್ದಾರೆ. ಈ ಮೂವರೂ ಇತ್ತೀಚೆಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.

ದಯಾಳ್‌ ನಿರ್ದೇಶನದ “ಆ ಕರಾಳ ರಾತ್ರಿ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಉಪೇಂದ್ರ ಅವರು ಬಂದಿದ್ದರು. ಇನ್ನು “ಐ ಲವ್‌ ಯೂ’ ಚಿತ್ರದಲ್ಲಿ ಉಪೇಂದ್ರ ಅವರನ್ನು ನಿರ್ದೇಶಿಸುತ್ತಿರುವ ಆರ್‌. ಚಂದ್ರು ಸಹ  ಕಾರ್ಯಕ್ರಮಕ್ಕೆ ಬಂದಿದ್ದರು. ತಮ್ಮ ಗುರುವಿನ ಜೊತೆಗಿನ ಸಂಬಂಧವನ್ನು ದಯಾಳ್‌ ನೆನಪಿಸಿಕೊಂಡರೆ, ದಯಾಳ್‌ ಜೊತೆಗೆ ಕೆಲಸ ಮಾಡಿದ್ದನ್ನು ಚಂದ್ರು ಮೆಲುಕು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next