Advertisement

ಭ್ರಷ್ಟಾಚಾರ ಚರ್ಚೆಗೆ ದಿನ, ಸ್ಥಳ ನಿಗದಿಪಡಿಸಿ

07:25 AM Sep 14, 2017 | Team Udayavani |

ಬೆಂಗಳೂರು: “ಹಿಂದಿನ ಬಿಜೆಪಿ ಸರ್ಕಾರ ಮತ್ತು ತಮ್ಮ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಗೆ ತಾವು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ವಿಧಾನಸೌಧದ ಮುಂಭಾಗ ಬುಧವಾರ ಕೆಎಸ್‌ಆರ್‌ಟಿಸಿಯ ನೂತನ ಕ್ಲಬ್‌ ಕ್ಲಾಸ್‌ ಬಸ್‌ಗಳ ಕಾರ್ಯಾಚರಣೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಕುರಿತು ಚರ್ಚಿಸಲು ಸಮಯ ಮತ್ತು ಸ್ಥಳ ನಿಗದಿಪಡಿಸುವಂತೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಸವಾಲು ಹಾಕಿದ್ದಾರೆ. “ಈ ಸವಾಲು ಸ್ವೀಕರಿಸುತ್ತೇನೆ. ಧೈರ್ಯವಿದ್ದರೆ ಅವರು ಚರ್ಚೆಗೆ ಬರಲಿ’ ಎಂದು ತಿರುಗೇಟು ನೀಡಿದರು.

ಪ್ರಧಾನಿಯಾಗುವ ರಾಹುಲ್‌ ಗಾಂಧಿ ಹೇಳಿಕೆ ತಿರುಕನ ಕನಸು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಈ ಹೇಳಿಕೆ ಬಾಲಿಷತನದಿಂದ ಕೂಡಿದೆ. ರಾಜೀವ್‌ಗಾಂಧಿ ಎಷ್ಟನೇ ವಯಸ್ಸಿಗೆ ಪ್ರಧಾನಿಯಾದರು ಎಂಬುದು ಬಿಎಸ್‌ವೈಗೆ ಗೊತ್ತಿದೆಯೇ? ಅದರಂತೆ ರಾಹುಲ್‌ ಕೂಡ ಪ್ರಧಾನಿಯಾಗುತ್ತಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next