Advertisement

ಜಂತುಹುಳ ನಿವಾರಣೆ ದಿನ:  5.15 ಲಕ್ಷ ಮಕ್ಕಳಿಗೆ ಮಾತ್ರೆ ನೀಡುವ ಗುರಿ

12:40 AM Feb 07, 2019 | |

ಮಂಗಳೂರು: ರಾಷ್ಟ್ರೀಯ ಜಂತುಹುಳ ನಿವಾರಣ ದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1ರಿಂದ 19 ವರ್ಷದೊಳಗಿನ ಮಕ್ಕಳಿಗೆ ಫೆ. 8ರಂದು ಅಲºಂಡಝೋಲ್‌ ಮಾತ್ರೆ ನೀಡಲಾಗುವುದು. ಈ ಬಾರಿ 5,15,433 ಮಕ್ಕಳಿಗೆ ಮಾತ್ರೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಬಂಟ್ವಾಳದ 95,652, ಬೆಳ್ತಂಗಡಿಯ 65,668, ಪುತ್ತೂರಿನ 78,077, ಸುಳ್ಯದ 35,135, ಮಂಗಳೂರಿನ 2,40,901 ಮಕ್ಕಳಿಗೆ ಮಾತ್ರ ನೀಡಲಾಗುವುದು. ಎಲ್ಲ ಮಕ್ಕಳಿಗೆ ಅಂಗನವಾಡಿ, ಶಾಲೆ, ಐಟಿಐ, ಪ.ಪೂ. ಕಾಲೇಜುಗಳಲ್ಲಿ ಉಚಿತವಾಗಿ ಮಾತ್ರೆ ನುಂಗಿಸುವ ವ್ಯವಸ್ಥೆ ಮಾಡಲಾಗುವುದು. ಆ ದಿನ ಮಾತ್ರೆ ನೀಡಲು ಬಾಕಿ ಇರುವ ಮಕ್ಕಳಿಗೆ ಫೆ. 14ರಂದು ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next