Advertisement

ಕಾವೇರಿ ವಿವಾದ: ಪುದುಚೇರಿ ಶಾಂತಿಯುತ ಬಂದ್‌

12:12 PM Apr 11, 2018 | udayavani editorial |

ಪುದುಚೇರಿ : ಪಿಎಂಕೆ ನೀಡಿರುವ ಕರೆಯನ್ವಯ ಪುದುಚೇರಿಯಲ್ಲಿ ಕಾವೇರಿ ವಿವಾದಕ್ಕೆ ಸಂಬಂಧಿಸಿ  ಇಂದು ಬೆಳಗ್ಗಿನಿಂದ ಸಂಜೆಯ ತನಕ ಬಂದ್‌ ನಡೆಯುತ್ತಿದೆ. 

Advertisement

ಪುದುಚೇರಿ ಆದ್ಯಂತ ಅಂಗಡಿ ಮುಂಗಟ್ಟು, ಕಚೇರಿ ಕಾರ್ಯಾಲಯಗಳು ಮುಚ್ಚಿವೆ. ಆಟೋ ರಿಕ್ಷಾ ಮತ್ತು ಬಸ್‌ ಸೇವೆ ತೀವ್ರವಾಗಿ ಬಾಧಿತವಾಗಿದೆ.  

ಅಂತಾರಾಜ್ಯ ಸೇವೆಯ ತಮಿಳು ನಾಡು ಸರಕಾರಿ ಬಸ್ಸುಗಳು ಮಾತ್ರ ಎಂದಿನಂತೆ ಓಡಾಡುತ್ತಿವೆ. ಖಾಸಗಿ ಶಾಲೆಗಳು ಇಂದು ರಜೆ ನೀಡಿವೆ. ಸರಕಾರಿ ಶಾಲೆಗಳಲ್ಲಿ ಹಾಜರಾತಿ ಬಹಳ ಕಡಿಮೆ ಇದೆ. ಸರಕಾರಿ ಕಚೇರಿಗಳಲ್ಲಿ ಹಾಜರಾತಿ ಮಾಮೂಲಿಯಂತಿದೆ. 

Advertisement

Udayavani is now on Telegram. Click here to join our channel and stay updated with the latest news.

Next