Advertisement

Davis Cup: ಸ್ವೀಡನ್‌ ವಿರುದ್ಧ ಭಾರತೀಯ ತಂಡ ಗೆಲುವು ಸಾಧ್ಯತೆ

10:57 PM Feb 15, 2024 | Team Udayavani |

ಬೆಂಗಳೂರು: ಸ್ವೀಡನ್‌ ವಿರುದ್ಧ ನಡೆಯಲಿರುವ ಡೇವಿಸ್‌ ಕಪ್‌ ವಿಶ್ವ ಬಣ ಒಂದರ ಹೋರಾಟದಲ್ಲಿ ಭಾರತೀಯ ತಂಡವು ಗೆಲುವು ಸಾಧಿಸುವ ಸಾಧ್ಯತೆಯಿದೆ ಎಂದು ರಾಮ್‌ಕುಮಾರ್‌ ರಾಮನಾಥನ್‌ ಹೇಳಿದ್ದಾರೆ.

Advertisement

ಒಂದು ವೇಳೆ ಸ್ವೀಡನ್‌ ತಂಡವು ಆವೇ ಅಂಗಣದಲ್ಲಿ ಆಡಿದರೂ ಭಾರತವು ಅವರ ಸವಾಲನ್ನು ಎದುರಿಸಲು ಸಮರ್ಥವಾಗಿದೆ ಎಂದವರು ತಿಳಿಸಿದರು. ಭಾರತ ಮತ್ತು ಸ್ವೀಡನ್‌ ಆರು ಬಾರಿ ಮುಖಾಮುಖೀಯಾಗಿದ್ದು ಭಾರತ ಒಮ್ಮೆಯೂ ಗೆಲ್ಲಲಿಲ್ಲ. ಇಸ್ಲಾಮಾಬಾದ್‌ನಲ್ಲಿ ನಡೆದ ಪ್ಲೇ ಆಫ್ನಲ್ಲಿ ಪಾಕಿಸ್ಥಾನವನ್ನು 4 0 ಅಂತರದಿಂದ ಸೋಲಿಸಿದ ಭಾರತ ವಿಶ್ವಬಣ ಒಂದಕ್ಕೆ ತೇರ್ಗಡೆಯಾಗಿತ್ತು.

ಸ್ವೀಡನ್‌ ತಂಡವು ಆವೇ ಅಂಗಣದಲ್ಲಿ ಆಡುವ ಸಾಧ್ಯತೆಯಿದೆ. ಆದರೆ ನಾವು ಇತ್ತೀಚೆಗಿನ ದಿನಗಳಲ್ಲಿ ಅಮೋಘ ಟೆನಿಸ್‌ ಆಟ ಪ್ರದರ್ಶಿಸುತ್ತಿದ್ದೇವೆ. ನಾನು ಮತ್ತು ಸುಮಿತ್‌ ನಾಗಲ್‌ ಎದುರಾಳಿಯನ್ನು ಎದುರಿಸಲು ಸಮರ್ಥರಿದ್ದೇವೆ ಎಂದು ರಾಜ್ಯ ಟೆನಿಸ್‌ ಅಸೋಸಿಯೇಶನ್‌ ಆಶ್ರಯದಲ್ಲಿ ಡೇವಿಸ್‌ ಕಪ್‌ ವಿಜೇತ ಆಟಗಾರರಿಗೆ ನಡೆದ ಸಮ್ಮಾನ ಸಮಾರಂಭದ ವೇಳೆ ರಾಮನಾಥನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next