Advertisement

Davanagere: 24 ಗಂಟೆಯಲ್ಲೇ ಕೊಲೆ ಆರೋಪಿ ಹಿಡಿದು ಕೊಟ್ಟ ಪೊಲೀಸ್‌ ಶ್ವಾನ “ತಾರಾ”

11:42 AM Aug 10, 2023 | Team Udayavani |

ದಾವಣಗೆರೆ: ತಾಲೂಕಿನ ಮಲ್ಲಶೆಟ್ಟಿಹಳ್ಳಿ ಕ್ರಾಸ್‌ ಬಳಿ ಸೋಮವಾರ ತಡರಾತ್ರಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸ್‌ ಶ್ವಾನ ತಾರಾಳ ನೆರವಿನಿಂದ 24 ಗಂಟೆಯಲ್ಲಿ ಬಂಧಿಸುವಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಇದನ್ನೂ ಓದಿ:North Korea: ಯುದ್ಧಕ್ಕೆ ಸಿದ್ದರಾಗಿ..: ಮಿಲಿಟರಿ ಅಧಿಕಾರಿಗಳಿಗೆ ಕಿಮ್ ಜಾಂಗ್ ಸೂಚನೆ

ದಾವಣಗೆರೆ ಹೊರವಲಯದ ಶ್ರೀರಾಮನಗರದ ನರಸಿಂಹ (24) ಎಂಬಾತನನ್ನು ಶಿವಯೋಗಿ ಅಲಿಯಾಸ್‌ ಯೋಗಿ (32) ಕೊಲೆ ಮಾಡಿದ್ದ. ಕೊಲೆ ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಗ್ರಾಮಾಂತರ ಪೊಲೀಸರು ಆರೋಪಿತನ ಪತ್ತೆಗಾಗಿ ಹುಡುಕಾಟ ಪ್ರಾರಂಭಿಸಿದರು.

ದಾವಣಗೆರೆ ಜಿಲ್ಲಾ ಡಾಗ್‌ ಸ್ಕ್ವಾಡ್‌ನ‌ ಕ್ರೈಂ ವಿಭಾಗದ ತಾರಾ, ಸುಮಾರು ಎಂಟು ಕಿಲೋಮೀಟರ್‌ ಕ್ರಮಿಸಿ ಆರೋಪಿಯ
ಗುರುತು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೊಲೆಗೀಡಾಗಿರುವ ನರಸಿಂಹ, ಆರೋಪಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದ. ಹೀಗೆಯೇ ಬಿಟ್ಟರೆ ಮುಂದೊಂದು ದಿನ ಅವನು ತನ್ನನ್ನೇ ಕೊಲೆ ಮಾಡಬಹುದು ಎಂಬ ಭಯದಿಂದ ನರಸಿಂಹನನ್ನು ಕೊಲೆ
ಮಾಡಿರುವುದಾಗಿ ಆರೋಪಿ ಶಿವಯೋಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next