Advertisement

Davanagere: ಶೀಲ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ!

09:36 PM Aug 17, 2024 | Team Udayavani |

ದಾವಣಗೆರೆ:  ಪತ್ನಿಯ ಶೀಲ ಶಂಕಿಸಿ ನಡೆದ ಜಗಳವು ಹತ್ಯೆಯಲ್ಲಿ ಅಂತ್ಯವಾದ ಘಟನೆ ಇಲ್ಲಿನ ಕೆಟಿಜೆ ನಗರದಲ್ಲಿ ನಡೆದಿದೆ.

Advertisement

ಪತಿ-ಪತ್ನಿ ಜಗಳದಲ್ಲಿ ಪತ್ನಿ ರೇಖಾ (35ವರ್ಷ) ಹತ್ಯೆಗೀಡಾದ ಮಹಿಳೆ. ಪತಿ ದೇವರಾಜ್ ಆಗಾಗ ಪಾನಮತ್ತನಾಗಿ ಮನೆಗೆ ಬಂದು ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ. ಹಾಗೆಯೇ ಶನಿವಾರ ಬೆಳಗ್ಗೆಯೂ ದೇವರಾಜ್ ಪತ್ನಿಯೊಂದಿಗೆ ಜಗಳವಾಡಿದ್ದು, ಈ ಜಗಳವು ವಿಕೋಪಕ್ಕೆ ಹೋಗಿ ಮನೆಯಲ್ಲಿ ಅಡುಗೆ ಮಾಡಲು ಬಳಸುವ  ಗುಂಡುಕಲ್ಲಿನಿಂದ ಪತ್ನಿಯ ತಲೆಗೆ ಎತ್ತಿಹಾಕಿ ಚಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ರೇಖಾಳನ್ನು ದೇವರಾಜ್  ವಿವಾಹವಾಗಿದ್ದರು.

ಶೀಲ ಶಂಕಿಸಿ ಪತ್ನಿಯ ಹತ್ಯೆಗೈದ  ಪತಿಯ ದೇವರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮತ್ತು ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next