Advertisement

ಲಂಚಕ್ಕೆ ಬೇಡಿಕೆ: ದಾವಣಗೆರೆ ಗ್ರಾಮಾಂತರ ಠಾಣೆ PSI, ಕಾನ್ಸ್‌ಟೇಬಲ್ ಲೋಕಾಯುಕ್ತ ಬಲೆಗೆ

08:29 PM Apr 22, 2023 | sudhir |

ದಾವಣಗೆರೆ: ಮಹಿಳೆ ಕಾಣೆಯಾದ ಪ್ರಕರಣದಲ್ಲಿ ಸಹಾಯ ಮಾಡಲು ಲಂಚದ ರೂಪದಲ್ಲಿ ೫೦ ಸಾವಿರ ರೂ.ಗಳನ್ನು ಫೋನ್ ಪೇ ಮೂಲಕ ಪಡೆದ ದಾವಣಗೆರೆ ಗ್ರಾಮಾಂತರ ಠಾಣೆ ಪಿಎಸ್ ಐ ಹಾಗೂ ಕಾನ್ಸ್‌ಟೇಬಲ್ ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Advertisement

ಪಿಎಸ್‌ಐ ಶಿವನಗೌಡ, ಪೊಲೀಸ್ ಲಿಂಗರಾಜ ನಾಯ್ಕ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದವರಾಗಿದ್ದಾರೆ. ಕಾಣೆಯಾದ ಮಹಿಳೆಯನ್ನು ಪತ್ತೆ ಹಚ್ಚಿದ ಕಳುಹಿಸಿಕೊಡಲು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ತಾಳೆಕಟ್ಟೆ ಗ್ರಾಮದ ಕೆ.ರಂಗಸ್ವಾಮಿ ಎಂಬುವರಿಗೆ 50,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ರಂಗಸ್ವಾಮಿ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿತರು ಲಂಚದ ಹಣವನ್ನು ಸ್ವೀಕರಿಸದೆ, ಪೋನ್ ಪೇ ಮಾಡುವಂತೆ ಹೇಳಿ ತಮ್ಮ ಮೊಬೈಲ್ ನಂಬರ್ ಕೊಟ್ಟಿದ್ದು, ಬೆಳಿಗ್ಗೆ ಇಬ್ಬರೂ ಫೋನ್ ಪೇ ಮೂಲಕ 50,000 ರೂ. ಲಂಚದ ಹಣ ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: IPL ಕೊನೆಯ ಓವರ್ ನಲ್ಲಿ ಚಿತ್ರಣ ಬದಲು; ರಾಹುಲ್ ಬಳಗ ಸೋಲಿಗೆ ಶರಣು

Advertisement

Udayavani is now on Telegram. Click here to join our channel and stay updated with the latest news.

Next