Advertisement

ನಾಳೆ ಬೀರಲಿಂಗೇಶ್ವರ ಸಮುದಾಯ ಭವನ ಉದ್ಘಾಟನೆ

07:41 PM May 14, 2022 | Team Udayavani |

ಹೊನ್ನಾಳಿ: ಪಟ್ಟಣದ ದೊಡ್ಡಕೇರಿ ಶ್ರೀಬೀರಲಿಂಗೇಶ್ವರ ಟ್ರಸ್ಟ್‌ ಕಮಿಟಿ ವತಿಯಿಂದದೊಡ್ಡಕೇರಿಯಲ್ಲಿ ಸರ್ವಾಂಗ ಸುಂದರವಾಗಿನಿರ್ಮಿಸಿರುವ ನೂತನ ಬೀರಲಿಂಗೇಶ್ವರಸಮುದಾಯ ಭವನದ ಉದ್ಘಾಟನೆ, ಶ್ರೀರೇವಣಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆ,

Advertisement

ಕಳಸಾರೋಹಣ ಹಾಗೂ ಸಾಮೂಹಿಕವಿವಾಹ ಕಾರ್ಯಕ್ರಮಗಳನ್ನು ಮೇ 15ರಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ , ಹಾಲುಮತಸಮಾಜದ ಮುಖಂಡ ಎಚ್‌.ಬಿ. ಮಂಜಪ್ಪಹೇಳಿದರು.ಪಟ್ಟಣದ ದೊಡ್ಡಕೇರಿ ಬೀರಲೆಂಗೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರುಮಾತನಾಡಿದರು.

ಅಂದು ನಡೆಯುವಧಾರ್ಮಿಕ ಹಾಗೂ ಧರ್ಮಸಭೆಯಸಾನ್ನಿಧ್ಯವನ್ನು ಕಾಗಿನೆಲೆ ಕನಕ ಗುರುಪೀಠದಜಗದ್ಗುರು ನಿರಂಜನಾನಂದಪುರಿಸ್ವಾಮೀಜಿ, ಹೊಸದುರ್ಗ ಶಾಖಾ ಮಠದಈಶ್ವರಾನಂದಪುರಿ ಸ್ವಾಮೀಜಿ, ಹಿರೇಕಲ್ಮಠದಡಾ| ಒಡೆಯರ್‌ ಚನ್ನಮಲ್ಲಿಕಾರ್ಜುನಶಿವಾಚಾರ್ಯ ಸ್ವಾಮೀಜಿ ವಹಿಸುವರುಎಂದು ತಿಳಿಸಿದರು.ಸಮುದಾಯ ಭವನದ ನಿವೇಶನವನ್ನುಹಿರೇಕಲ್ಮಠದ ಲಿಂ.ಒಡೆಯರ್‌ ಚಂದ್ರಶೇಖರಶಿವಾಚಾರ್ಯ ಸ್ವಾಮೀಜಿ ದಾನವಾಗಿಸಮಾಜಕ್ಕೆ ನೀಡಿದ್ದರು.

ಬೀರಲಿಂಗೇಶ್ವರಸಮುದಾಯ ಭವನವನ್ನು ಮಾಜಿ ಸಚಿವಎಚ್‌.ಎಂ.ರೇವಣ್ಣ ಉದ್ಘಾಟಿಸಲಿದ್ದಾರೆ.ಸಮಾರಂಭದ ಅಧ್ಯಕ್ಷತೆಯನ್ನು ಜಿಪಂಮಾಜಿ ಅಧ್ಯಕ್ಷ , ಜಿಲ್ಲಾ ಕಾಂಗ್ರೆಸ್‌ಅಧ್ಯಕ್ಷ ಎಚ್‌.ಬಿ.ಮಂಜಪ್ಪ ಅಧ್ಯಕ್ಷತೆವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವಭೈರತಿ ಬಸವರಾಜ್‌, ವರುಣಾ ಶಾಸಕಡಾ| ಯತೀಂದ್ರಸಿದ್ದರಾಮಯ್ಯ, ಸಂಸದಜಿ.ಎಂ.ಸಿದ್ದೇಶ್‌, ಮಾಜಿ ಸಚಿವರಾದಎಸ್‌.ಎಸ್‌.ಮಲ್ಲಿಕಾರ್ಜುನ, ಕೆ.ಎಸ್‌.ಈಶ್ವರಪ್ಪ, ಎಚ್‌.ಆಂಜನೇಯ, ಹರಿಹರಶಾಸಕ ಎಸ್‌.ರಾಮಪ್ಪ, ಹೊನ್ನಾಳಿ ಶಾಸಕಎಂ.ಪಿ.ರೇಣುಕಾಚಾರ್ಯ, ವಿಧಾನಪರಿಷತ್‌ ಸದಸ್ಯ ಕೊಂಡಜ್ಜಿ ಮೋಹನ್‌,ಮಾಜಿ ವಿಧಾನ ಪರಿಷತ್‌ ಸದಸ್ಯಪ್ರಸನ್ನಕುಮಾರ್‌, ಮಾಜಿ ಶಾಸಕರಾದಡಿ.ಜಿ. ಶಾಂತನಗೌಡ, ಡಾ| ಡಿ.ಬಿ. ಗಂಗಪ್ಪಸೇರಿದಂತೆ ಇತರ ಜನಪ್ರತಿನಿ ಧಿಗಳುಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.

ಧಾರ್ಮಿಕ ಹಾಗೂ ಧರ್ಮಸಭೆಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿತಾಲೂಕಿನ ಜನತೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿಮಾಡಿದರು. ಸಮಿತಿ ಅಧ್ಯಕ್ಷ ಎಚ್‌.ಬಿ.ಗಿಡ್ಡಪ್ಪ, ಮುಖಂಡರಾದ ಮಾದಪ್ಪ,ವಿಜೇಂದ್ರಪ್ಪ, ನರಸಪ್ಪಗೌಡ, ಎಂ.ಪಿ.ನರಸಿಂಹಪ್ಪ, ಗಣಮಗ ಕುಮಾರಸ್ವಾಮಿಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next