Advertisement

ಕೂಡಲ ಸಂಗಮ ಶ್ರೀ ಜನ್ಮದಿನ: ರಕ್ತದಾನ ಶಿಬಿರ

08:55 PM Dec 24, 2021 | Team Udayavani |

ದಾವಣಗೆರೆ: ಕೂಡಲಸಂಗಮದಲಿಂಗಾಯತ ಪಂಚಮಸಾಲಿಪೀಠದ ಪ್ರಥಮ ಜಗದ್ಗುರು ಶ್ರೀಬಸವ ಜಯ ಮೃತ್ಯುಂಜಯಸ್ವಾಮೀಜಿಯವರ 42ನೇ ಜನ್ಮದಿನಹಾಗೂ ರೈತ ದಿನಾಚರಣೆಯಪ್ರಯುಕ್ತ ಗುರುವಾರ ನಗರದಡಾ| ಸದ್ಯೋಜಾತ ಹಿರೇಮಠದಲ್ಲಿರಕ್ತದಾನ ಶಿಬಿರ ನಡೆಯಿತು.

Advertisement

ರಕ್ತದಾನ ಮಾಡುವ ಮೂಲಕರಕ್ತದಾನ ಶಿಬಿರ ಉದ್ಘಾಟಿಸಿಮಾತನಾಡಿದ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌, ಕಳೆದ ಒಂದುವರ್ಷದ ಹಿಂದೆ ಲಿಂಗಾಯತಪಂಚಮಸಾಲಿ ಸಮಾಜಕ್ಕೆ2ಎ ಮೀಸಲಾತಿ ನೀಡಬೇಕುಎಂಬ ಅಭಿಯಾನ ಪ್ರಾರಂಭಮಾಡಲಾಗಿತ್ತು. “ರಕ್ತ ಕೊಟ್ಟೇವು 2ಎಮೀಸಲಾತಿ ಪಡೆಯುತ್ತೇವೆ’ ಎಂದುನಡೆಸಿದ ಅಭಿಯಾನ ಸಂಚಲನಮೂಡಿಸಿತು.

ನಮ್ಮ ಸಮಾಜದಹಕ್ಕು, ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿಸರ್ಕಾರದ ಗಮನ ಸೆಳೆಯುವಹಿನ್ನೆಲೆಯಲ್ಲಿ ರಕ್ತದಾನ ಶಿಬಿರಹಮ್ಮಿಕೊಳ್ಳಲಾಗಿದೆ. ಸರ್ಕಾರ ಆದಷ್ಟುಬೇಗ 2ಎಮೀಸಲಾತಿ ನೀಡುವವಿಶ್ವಾಸ ಇದೆ ಎಂದು ತಿಳಿಸಿದರು.ಬೆಳಗಾವಿಯ ಸುವರ್ಣಸೌಧದ ಎದುರು ರಕ್ತ ದಾಸೋಹಹಮ್ಮಿಕೊಳ್ಳಲು ಉದ್ದೇಶಿಸಲಾಗಿತ್ತು.ಸರ್ಕಾರದ ಕೋರಿಕೆ ಹಿನ್ನೆಲೆಯಲ್ಲಿಗಾಂಧಿ ಭವನದಲ್ಲಿರಕ್ತದಾನಶಿಬಿರ ನಡೆಯುತ್ತಿದೆ. ದಾವಣಗೆರೆಸೇರಿದಂತೆ ರಾಜ್ಯಾದ್ಯಂತ ರಕ್ತದಾನಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಅಖೀಲ ಭಾರತ ಲಿಂಗಾಯತಪಂಚಮಸಾಲಿ ಮಹಾಸಭಾದಯುವಘಟಕದ ಅಧ್ಯಕ್ಷ ಬಿ.ಜೆ.ಅಜಯ್‌ ಕುಮಾರ್‌, ಸೋಗಿಶಾಂತಕುಮಾರ್‌, ಅಶೋಕ್‌ಗೋಪನಾಳ್‌ ಇತರರು, ಸದಸ್ಯರು,ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next