Advertisement

ದಾವಣಗೆರೆ ಮೇಯರ್ ಮತ್ತು ಕುಟುಂಬಕ್ಕೆ ಕೋವಿಡ್ ಸೋಂಕು ಕಾಟ

04:47 PM Jul 25, 2020 | keerthan |

ದಾವಣಗೆರೆ: ನಗರದ ಪ್ರಥಮ ಪ್ರಜೆ ಮತ್ತವರ ಕುಟುಂಬಕ್ಕೆ ಕೋವಿಡ್-19 ವೈರಸ್ ಕಾಟ ಆರಂಭವಾಗಿದೆ. ಮೇಯರ್ ಬಿ.ಜಿ.ಅಜಯ್ ಕುಮಾರ್, ಪತ್ನಿ ಹಾಗೂ ಮಗನಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಸ್ವತಃ ಮೇಯರ್ ಅಜಯ್ ಕುಮಾರ್ ಮಾಧ್ಯಮಗಳಿಗೆ ಸೋಂಕು ತಾಗಿರುವುದು ಖಚಿತಪಡಿಸಿದ್ದಾರೆ.

Advertisement

ಇತ್ತೀಚೆಗೆ ನಗರಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರೊಬ್ಬರು ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಕಾರು ಚಾಲಕ ಇತರೆ ಓರ್ವನಿಗೆ ಸೋಂಕು ಪತ್ತೆಯಾಗಿದೆ. ಹಾಗಾಗಿ ದೂಡಾ ಅಧ್ಯಕ್ಷ ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ.‌ ದಾವಣಗೆರೆಯ ಪುರಪಿತೃಗಳೇ ಸೋಂಕಿಗೆ ಒಳಗಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next