Advertisement

Davanagere ಕಳವಾಗಿದ್ದ ಅಲಿ ದೇವರ ಮೂರ್ತಿ ಪತ್ತೆ

09:17 PM Jul 09, 2024 | Team Udayavani |

ದಾವಣಗೆರೆ: ಸಮೀಪದ ಹಳೇ ಕುಂದುವಾಡದಲ್ಲಿ ಒಂದು ವಾರದ ಹಿಂದೆ ಕಳವಾಗಿದ್ದಂತಹ ಅಲಿ ದೇವರು (ಮೊಹರಂನಲ್ಲಿ ಆರಾಧಿಸುವ ದೇವರ ಪ್ರತಿಮೆ, ಇತರೆ) ಮಂಗಳವಾರ ಪತ್ತೆಯಾಗಿವೆ.

Advertisement

ಹಳೇ ಕುಂದುವಾಡದಲ್ಲಿರುವ ಮಸೀದಿಯ ಬಾಗಿಲು ಒಡೆದು, ಅಲಿ ದೇವರನ್ನ ಕಳ್ಳರು ಕದ್ದೊಯ್ದಿದ್ದರು. ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮೊಹರಂನಲ್ಲಿ ಪೂಜಿಸುವಂತಹ ದೇವರ ಮೂರ್ತಿಗಳ ಕಳವಿನ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿದ್ದರಿಂದ ಕದ್ದಿದ್ದ ದೇವರನ್ನ ಬಿಸಾಡಿದ್ದರು. ಅಲ್ಲದೆ ಸಂಶಯ ಬಾರದಂತೆ ದೇವರ ಮೇಲೆ ಕಾರದ ಪುಡಿ ಚೆಲ್ಲಲಾಗಿತ್ತು. ಅಲಿ ದೇವರ ಮೂರ್ತಿಗಳ ರಸ್ತೆ ಬದಿಯಲ್ಲಿ ಪತ್ತೆಯಾದ ಸುದ್ದಿ ತಿಳಿದ ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮುಂದಿನ ವಾರ ಮೊಹರಂ ಹಬ್ಬ ಹಿನ್ನಲೆ ದೇವರು ಗಳನ್ನ ಸಮಾಜದ ಮುಖಂಡರಿಗೆ ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next