Advertisement

ಹಂಪಿ ಸ್ಮಾರಕ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ

10:25 PM Jun 25, 2021 | Team Udayavani |

„ಪಿ.ಸತ್ಯನಾರಾಯಣ

Advertisement

ಹೊಸಪೇಟೆ: ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಪ್ರವಾಸಿಗರಿಲ್ಲದೇ ಬಣಗುಡುತ್ತಿದ್ದ ವಿಶ್ವ ವಿಖ್ಯಾತ ಹಂಪಿಯಲ್ಲಿ ಇದೀಗ ಪ್ರವಾಸಿಗರ ಸದ್ದು ಕೇಳಿ ಬರುತ್ತಿದೆ.

ವಿರುಪಾಕ್ಷೇಶ್ವರ ದೇವಾಲಯ ಪ್ರವೇಶ ಹೊರತುಪಡಿಸಿ, ಉಳಿದೆಲ್ಲ ಸ್ಮಾರಕಗಳ ವೀಕ್ಷಣೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಹಂಪಿ ಕಡೆ ಮುಖ ಮಾಡಿ, ಮೊದಲ ದಿನವೇ ಸ್ಮಾರಕ ವೀಕ್ಷಣೆ ಮಾಡಿದರು. ಕೋವಿಡ್‌ ಕಡಿಮೆಯಾಗುತ್ತಿದಂತೆ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯನ್ನು ರಾಜ್ಯ ಸರ್ಕಾರ ಅನ್‌ಲಾಕ್‌ಗೆ ಆದೇಶ ನೀಡಿತ್ತಾದರೂ ಹಂಪಿ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಸಿಕ್ಕಿರಲ್ಲಿಲ್ಲ.

ಹಂಪಿಯಲ್ಲಿ ಗೈಡ್‌ಗಳು, ಆಟೋಚಾಲಕರು ಹಾಗೂ ಹಣ್ಣು-ಕಾಯಿ, ಸಣ್ಣಪುಟ್ಟ ಹೋಟೆಲ್‌, ಗೂಡಂಗಡಿ ವ್ಯಾಪಾರಿಗಳು ಇತರೆ ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು.

ವಿರೂಪಾಕ್ಷ ದೇವಾಲಯಕ್ಕೆ ಬೀಗ: ಹಂಪಿ ವಿರೂಪಾಕ್ಷೇಶ್ವರ ದೇವಾಲಯ, ಯಂತ್ರೋದ್ಧಾರಕ ಆಂಜನೇಯ, ಕೋದಂಡರಾಮ ಸ್ವಾಮಿ, ಉದ್ದಾನ ವೀರಭದ್ರೇಶ್ವರ ದೇವಾಲಯಗಳ ಪ್ರವೇಶ ನಿರ್ಬಂಧ ಹೇರಿದ್ದರಿಂದ ಆರ್ಚಕರಿಗೂ ಸಂಕಷ್ಟ ಎದುರಾಗಿತ್ತು.

Advertisement

ವಾನರರಿಗೆ ಸಂಕಷ್ಟ: ಪ್ರವಾಸಿಗರಿಂದ ಹಸಿವು ನೀಗಿಸಿಕೊಳ್ಳುತ್ತಿದ್ದ ಕೋತಿಗಳು, ಗೋವು-ಪ್ರಾಣಿ ಪಕ್ಷಿಗಳು ಆಹಾರವಿಲ್ಲದೇ ಮೂಕ ವೇದನೆ ಅನುಭವಿಸುವಂತಾಯಿತು. ಇದನ್ನು ಗಮನಿಸಿದ ವಿವಿಧ ಸಂಘಟನೆ ಪದಾ ಧಿಕಾರಿಗಳು, ಹೋಮ್‌ ಗಾರ್ಡ್‌, ಸ್ಥಳೀಯರು ಆಹಾರ-ನೀರು ನೀಡಿ ಮಾನವೀಯತೆ ತೋರಿದರು.

ಆಹಾರ್‌ ಕಿಟ್‌: ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಗೈಡ್‌ಗಳಿಗೆ ಕೆಲ ದಾನಿಗಳು ಆಹಾರ ಕಿಟ್‌ ನೀಡಿದರೆ ಇನ್ನೂ ಕೆಲವರು, ಆರ್ಥಿಕ ಸಹಾಯ ಮಾಡಿ ಸಹಾಯ ಹಸ್ತ ಚಾಚಿದರು. ಹಂಪಿಗೆ ಪ್ರವಾಸಿಗರ ಆಗಮನ್‌ ಎದುರು ನೋಡುತ್ತಿದ್ದ ಹೋಟೆಲ್‌-ಲಾಡ್ಜ್ ಇತರೆ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದ ಉದ್ಯಮಿಗಳಿಗೆ ತುಸು ನೆಮ್ಮದಿ ಸಿಕ್ಕಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next