Advertisement

ಬಿಎಸ್‌ವೈ ಹೋಂ ಪ್ರಾಡಕ್ಟ್ ಅಲ್ಲ : ರೇಣು

10:10 PM Jun 17, 2021 | Team Udayavani |

ಹೊನ್ನಾಳಿ: ಸಿಎಂ ಯಡಿಯೂರಪ್ಪ ಹೋಂ ಪ್ರಾಡಕ್ಟ್ ಅಲ್ಲ. ನೂರಾರು ಹೋರಾಟಗಳನ್ನು ಮಾಡಿಕೊಂಡು ಸಾಧನೆ ಮಾಡಿ ಮುಖ್ಯಮಂತ್ರಿಯಾದವರು. ಅಂಥವರ ಬಗ್ಗೆ ನಿನ್ನೆ ಮೊನ್ನೆ ಬಂದವರು ಮಾತನಾಡುವುದು ಸರಿಯಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಬೆಂಗಳೂರಿಗೆ ಆಗಮಿಸಿದ್ದಾರೆ. ಶಾಸಕರೆಲ್ಲರೂ ಅವರನ್ನು ಭೇಟಿ ಮಾಡಿ ನಾಯಕತ್ವ ಬದಲಾವಣೆ ಬಗ್ಗೆ ಯಾರು ಮಾತನಾಡುತ್ತಾರೋ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇವೆ. ನಾಯಕತ್ವ ಬದಲಾವಣೆ ಸಲುವಾಗಿ ದೆಹಲಿಗೆ ಹೋದರೆ ಆಗುತ್ತದೆಯೇ, ಯಾರೋ ಒಂದಿಬ್ಬರು ಹೇಳಿದ ತಕ್ಷಣ ಅವರ ಮಾತುಗಳನ್ನು ವರಿಷ್ಠರು ಕೇಳಿ ಬಿಡುತ್ತಾರಾ? ಸುಮ್ಮನೆ ಪಕ್ಷದಲ್ಲಿ ಗೊಂದಲ ಸೃಷ್ಟಿಸುವುದನ್ನು ಬಿಡಬೇಕು. ಬಿಜೆಪಿ ಸಂಘ ಪರಿವಾರದ ಹಿನ್ನೆಲೆ ಇರುವ ಶಿಸ್ತಿನ ಪಕ್ಷ. ಇಲ್ಲಿ ಅಶಿಸ್ತಿಗೆ ಅವಕಾಶ ಇಲ್ಲ ಎಂದರು.

ಸಹಿ ಸಂಗ್ರಹ ಮಾಡಿದ್ದು ನಿಜ: ಸಿಎಂ ಯಡಿಯೂರಪ್ಪ ಪರ 65 ಶಾಸಕರ ಸಹಿ ಸಂಗ್ರಹ ಮಾಡಿದ್ದು ನಿಜ. ಸಹಿ ಸಂಗ್ರಹ ಮಾಡುವುದನ್ನು ವರಿಷ್ಠರು ವಿರೋ  ಧಿಸುತ್ತಾರೆ. ಆದ್ದರಿಂದ ನೀನು ಸಹಿ ಸಂಗ್ರಹ ಮಾಡುವುದನ್ನು ನಿಲ್ಲಿಸು ಎಂದು ಸ್ವತಃ ಮುಖ್ಯಮಂತ್ರಿಗಳೇ ಸೂಚಿಸಿದರು. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕೂಡ ಸಹಿ ಸಂಗ್ರಹ ಬೇಡ ಎಂದ ಮೇಲೆ ಸಹಿ ಸಂಗ್ರಹ ಕಾರ್ಯ ಸ್ಥಗಿತಗೊಳಿಸಲಾಗಿದೆ.

ಯತ್ನಾಳ, ಅರವಿಂದ ಬೆಲ್ಲದ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಜೇಬಲ್ಲಿ ಚೀಟಿ ಇಟ್ಟುಕೊಂಡು ಸೂಟು ಬೂಟು ತಯಾರಿ ಮಾಡಿಕೊಂಡಿದ್ದಾರೆ. ನೀನು ನನ್ನ ಜೊತೆ ಇರು, ನಿನ್ನನ್ನು ಮಂತ್ರಿ ಮಾಡುತ್ತೇನೆ ಎಂದು ವಿಧಾನಸೌಧದಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ಮಾತನಾಡಿರುವುದನ್ನು ಕೇಳಿದ್ದೇವೆ. ಈ ಬಗ್ಗೆಯೂ ವರಿಷ್ಠರು ಗಮನ ಹರಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next