Advertisement

ಆರ್‌ಎಸ್‌ಎಸ್‌, ಸೇವಾ ಭಾರತಿಯಿಂದ ರಕ್ತದಾನ ಶಿಬಿರ

08:46 PM Jun 01, 2021 | Team Udayavani |

ಹರಿಹರ: ನಗರದ ಗಿರಿಯಮ್ಮ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಸೇವಾ ಭಾರತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

Advertisement

ಕೋವಿಡ್‌ ಲಸಿಕೆ ಹಾಕಿಸಿಕೊಂಡ ನಿಗದಿತ ಅವಧಿವರೆಗೆ ರಕ್ತದಾನ ಮಾಡಲಾಗುವುದಿಲ್ಲ. ಆರೋಗ್ಯ ತುರ್ತು ಸ್ಥಿತಿಯಲ್ಲಿ ರೋಗಿಗಳ ಚಿಕಿತ್ಸೆಗೆ ರಕ್ತದ ಕೊರತೆ ಆಗಬಾರದೆಂಬ ಉದ್ದೇಶದಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದರು.

ಅನ್ಯ ಕಾರ್ಯ ನಿಮಿತ್ತ ನಗರಕ್ಕೆ ಆಗಮಿಸಿದ್ದ ವಸತಿ ಸಚಿವ ವಿ. ಸೋಮಣ್ಣ, ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಬಿ.ಪಿ. ಹರೀಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌. ಎಂ.ವೀರೇಶ್‌ ಹನಗವಾಡಿ ಶಿಬಿರಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಸ್ಪತ್ರೆಯ ಬ್ಲಿಡ್‌ ಬ್ಯಾಂಕ್‌ ಸಿಬ್ಬಂದಿ 34 ಯುನಿಟ್‌ ರಕ್ತ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ನಗರ ಕಾರ್ಯವಾಹ ರಘುರಾಮ್‌, ಪದಾ  ಧಿಕಾರಿಗಳಾದ ಹರೀಶ್‌, ಪ್ರಭಾಕರ್‌, ಶಿವಪ್ರಸಾದ್‌, ಕಾಲೇಜು ಸಂಸ್ಥೆಯ ಅಧ್ಯಕ್ಷ ತಿಪ್ಪೇಸ್ವಾಮಿ (ಪಾಪಣ್ಣಿ), ನಗರಸಭಾ ಸದಸ್ಯ ರಜನಿಕಾಂತ್‌, ಸಾರ್ವಜನಿಕ ಆಸ್ಪತ್ರೆ ಆರೋಗ್ಯ ರûಾ ಸಮಿತಿಯ ವೀರೇಶ್‌ ಆಚಾರ್‌, ಮಂಜುನಾಥ್‌ ನಲ್ಲಿ, ಐರಣಿ ರಾಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next