Advertisement

ದತ್ತ ಮಾಲಾ ಅಭಿಯಾನಕ್ಕೆ ಚಾಲನೆ

10:06 AM Dec 13, 2018 | |

ಮಂಗಳೂರು: ಚಿಕ್ಕಮಗಳೂರಿನ ದತ್ತಪೀಠದಲ್ಲಿ ಡಿ. 12ರಿಂದ 21ರ ವರೆಗೆ ನಡೆಯುವ ದತ್ತ ಜಯಂತಿ ಅಂಗವಾಗಿ ಕದ್ರಿಯ ವಿಶ್ವ ಹಿಂದೂ ಪರಿಷತ್‌ ಕಾರ್ಯಾಲಯದಲ್ಲಿ ಬುಧವಾರ ದತ್ತ ಹೋಮ ಮತ್ತು ದತ್ತ ಮಾಲಾಧಾರಣೆ  ನಡೆಯಿತು.

Advertisement

ಬಜರಂಗ ದಳ ದಕ್ಷಿಣ ಪ್ರಾಂತದ ಪ್ರಾಂತ ಸಂಯೋಜಕ್‌ ಸುನೀಲ್‌ ಕೆ.ಆರ್‌., ವಿಭಾಗ ಸಂಚಾಲಕ ಭುಜಂಗ ಕುಲಾಲ್‌, ಜಿಲ್ಲಾ ಸಂಚಾಲಕ ಪ್ರವೀಣ್‌ ಕುತ್ತಾರ್‌, ವಿಭಾಗ ಕಾರ್ಯದರ್ಶಿ ಶರಣ್‌ ಪಂಪವೆಲ್‌, ವಿಹಿಂಪ‌ ಜಿಲ್ಲಾಧ್ಯಕ್ಷ ಜಗದೀಶ್‌ ಶೇಣವ, ಕಾರ್ಯದರ್ಶಿ ಶಿವಾನಂದ ಮೆಂಡನ್‌, ಜಿಲ್ಲಾ ಸಹ ಸಂಚಾಲಕ ಪುನೀತ್‌ ಅತ್ತಾವರ, ನವೀನ್‌ ಮೂಡುಶೆಡ್ಡೆ, ಗುರುಪ್ರಸಾದ್‌ ಉಳ್ಳಾಲ್‌, ಪ್ರದೀಪ್‌ ಸರಿಪಲ್ಲ ಉಪಸ್ಥಿತರಿದ್ದರು.

ಡಿ. 22ರಂದು ನಡೆಯಲಿರುವ ದತ್ತ ಪಾದುಕೆ ದರ್ಶನ ಅಭಿಯಾನದಲ್ಲಿ 50,000ಕ್ಕೂ ಅ ಧಿಕ ಮಂದಿ ಭಾಗವಹಿಸಲಿದ್ದು, ಮಂಗಳೂರು, ಉಡುಪಿ, ಪುತ್ತೂರು, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳಿಂದ 15,000ದಷ್ಟು ದತ್ತಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧೆಡೆ ದತ್ತ ಮಾಲಾ ಧಾರಣೆ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next