Advertisement

Kadur;ಬರ್ತ್‌ಡೇ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ದತ್ತ

09:09 PM Jun 25, 2023 | Team Udayavani |

ಕಡೂರು: ಮಾಜಿ ಶಾಸಕ ವೈ.ಎಸ್‌.ವಿ. ದತ್ತ 70ನೇ ಜನ್ಮ ದಿನದ ಅಂಗವಾಗಿ ಕಡೂರು ಕ್ಷೇತ್ರದ ಯಗಟಿ, ಪಾತೇನಹಳ್ಳಿ ಮತ್ತು ಚೌಡ್ಲಾಪುರ ಗ್ರಾಮಗಳಲ್ಲಿ ಅವರ ಅಭಿಮಾನಿಗಳೊಂದಿಗೆ ದತ್ತ ಅವರು ಕುಣಿದು ಕುಪ್ಪಳಿಸುವುದರೊಂದಿಗೆ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು.

Advertisement

ಶನಿವಾರ ಬೆಳಗ್ಗೆಯಿಂದಲೇ ಸ್ವಗ್ರಾಮ ಯಗಟಿಯಲ್ಲಿರುವ ದತ್ತ ಅವರ ನಿವಾಸಕ್ಕೆ ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಗಮಿಸಿ ಶುಭ ಕೋರಿ ಕೇಕ್‌ ಕತ್ತರಿಸಿ ತಮ್ಮ ಪ್ರೀತಿ ವ್ಯಕ್ತಪಡಿಸಿದರು. ಪಾತೇನಹಳ್ಳಿಯಲ್ಲಿನ ಯುವಕರು ಮತ್ತು ಗ್ರಾಮಸ್ಥರು ಶನಿವಾರ ರಾತ್ರಿ ಸುಮಾರು 8 ಗಂಟೆಗೆ ಊಟ ಏರ್ಪಡಿಸಿ ಊರಿಗೆಲ್ಲಾ ಸಿಹಿಊಟ ಉಣಬಡಿಸಿದ ನಂತರ ದತ್ತ ಅವರನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಿದರು.

ಡಿಜೆಯೊಂದಿಗೆ ಡಾ| ರಾಜ್‌ಕುಮಾರ್‌ ಅವರ ಶಬ್ದವೇದಿ ಚಲನಚಿತ್ರದ “ಜನರಿಂದ ನಾನು ಮೇಲೆ ಬಂದೇ ಜನರನ್ನೇ ನನ್ನ ದೇವರೆಂದೆ’ ಎಂಬ ಹಾಡಿಗೆ ಯುವಕರೊಂದಿಗೆ ದತ್ತ ಸಹ ಕುಣಿದು ಸಂಭ್ರಮಿಸಿದರು. ಪಾತೇನಹಳ್ಳಿಯ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿ ಮಹಿಳೆಯರು ಸಹ ತಮ್ಮ ಊರಿನ ಮಗನಂತೆ ದತ್ತ ಅವರಿಗೆ ಆರತಿ ಮಾಡಿ ಹಾರೈಸಿದರು. ಯುವಕರ ಸಂಭ್ರಮ ಮುಗಿಲು ಮುಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next