Advertisement

ಮೇಲ್ಛಾವಣಿ ನಿರ್ಮಾಣ ಕಾಮಗಾರಿಗೆ ಬಿ.ಎಸ್ ಯಡಿಯೂರಪ್ಪ ಶಂಕು ಸ್ಥಾಪನೆ

07:08 PM Sep 29, 2019 | Team Udayavani |

ಮೈಸೂರು: ದಸರಾ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಸಿ, ಸುಮಾರು 3 ಕೋಟಿ ರೂ.ಗಳ ಪ್ರೇಕ್ಷಕರ ಕುಳಿತು ಕೊಳ್ಳುವ ಮೇಲ್ಛಾವಣಿ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶಂಕು ಸ್ಥಾಪನೆ ನೆರೆವೇರಿಸಿದರು.

Advertisement

ವಸ್ತು ಪ್ರದರ್ಶನದ ಆವರಣದಲ್ಲಿರುವ ಕುಸ್ತಿ ಪಂದ್ಯಾವಳಿಯ ಆವರಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಸಿ ಮಾತನಾಡಿದ ಅವರು ಇದೇ ವೇಳೆ ಕುಸ್ತಿ ಪಟುಗಳ ಮಾಸಾಶನವನ್ನು 500 ರೂಗಳಿಂದ. 1000ರೂ ಗಳಿಗೆ ಏರಿಕೆ‌ ಮಾಡುವುದಾಗಿ ಘೋಷಣೆ ಮಾಡಿದರು. ಉಳಿಕೆ ಬಾಕಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಕೆ.ಜಿ ಕೊಪ್ಪಲಿನ ಪೈಲ್ವಾನ್ ಡಿ.ಕರಿಗೌಡ ಅವರು ಕುಸ್ತಿ ಪಂದ್ಯಾವಳಿಯ ಜ್ಯೋತಿನ್ನು ತಂದರು ಆ ಜ್ಯೋತಿಯನ್ನು ಮುಖ್ಯ ಮಂತ್ರಿಗಳು ಕುಸ್ತಿ ಪಂದ್ಯಾವಳಿಯ ಆಯೋಜಕರಿಗೆ ನೀಡಿದರು.ಮೊದಲನೆಯ ಕುಸ್ತಿಯು ಕನಕಪುರದ ಸ್ವರೂಪ್ ಗೌಡ ಮತ್ತು ನಜ಼ರ್ ಬಾದ್ ನ ಚೇತನ್ ಗೌಡ ನಡುವೆ ಹಾಗೂ ಕರಿಯ ವಯಸ್ಸಿನ ಪೈಲ್ವಾನ್ ಮುಖೇಸ್ ಗೌಡ ಮತ್ತು ಶ್ರೇಯಸ್ ನಡುವೆ ಸಮ ಬಲದ ಕುಸ್ತಿ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ ,ಶಾಸಕರಾದ ನಾಗೇಂದ್ರ ಮಹಾಪೌರಾದ ಪುಷ್ಪಲತಾ ಜಗನ್ನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next