Advertisement

ನಗರದಲ್ಲಿ ದಸರಾ ಆಚರಣೆ ಸಂಪನ್ನ

09:57 PM Oct 08, 2019 | Lakshmi GovindaRaju |

ಹಾಸನ: ವಿಜಯ ದಶಮಿ ಅಂಗವಾಗಿ ನಗರದ ಸಾಲಗಾಮೆ ರಸ್ತೆಯಲ್ಲಿರುವ ಮಹಾನವಮಿ ಮಂಟಪ (ಬನ್ನಿಮಂಟಪ) ದಲ್ಲಿ ಮಂಗಳವಾರ ಸಂಜೆ ನರಸಿಂಹರಾಜ ಅರಸ್‌ ಬನ್ನಿ ಕಡಿಯುವ ಮೂಲಕ ದಸರಾ ಆಚರಣೆ ಸಂಪನ್ನಗೊಂಡಿತು. ಹಾಸನ ನಗರದ ವಿವಿಧ ಬಡಾವಣೆಗಳಿಂದ ಊರ ದೇವರುಗಳಾದ ಶ್ರೀ ಮೈಲಾರಲಿಂಗೇಶ್ವರ, ಶ್ರೀ ಚನ್ನಕೇಶವ, ಶ್ರೀ ವಿರೂಪಾಕ್ಷ, ಶ್ರೀ ಆಂಜನೇಯ ಹಾಗೂ ಶ್ರೀ ಸಿದ್ಧೇಶ್ವರ ದೇವರ ಅಡ್ಡೆ ಮೆರವಣಿಗೆ ಹಾಸನಾಂಬ ದೇವಾಲಯದ ವೃತ್ತದಿಂದ ಮಂಗಳವಾರ ಬೆಳಿಗ್ಗೆಯಿಂದಲೇ ರಂಭವಾಯಿತು.ದ ವಿವಿಧ ಬೀದಿಗಳಲ್ಲಿ ಅಡ್ಡೆ ದೇವರ ಮೆರವಣಿಗೆ ಮಹಾನವಮಿ ಮಂಟಪಕ್ಕೆ ಆಗಮಿಸಿತು.

Advertisement

ಅಷ್ಟರಲ್ಲಿ ಮಹಾನವಮಿ ಮಂಟಪದ ಆವರಣದಲ್ಲಿ ಬಾಳೆ ಕಂದಿಗೆ ಬನ್ನಿಪತ್ರೆ ಮುಡಿಸಿ ಫ‌ೂಜೆಗೆ ಅಣಿಗೊಳಿಸಲಾಗಿತ್ತು. ಅಡ್ಡೆದೇವರುಗಳು ಮಹಾ ನವಮಿ ಮಂಟಪಕ್ಕೆ ಆಗಮಿಸಿದ ನಂತರ ಬನ್ನಿ ಮುಡಿದ ಬಾಳೆ ಕಂದಿಗೆ ಪಂಜಿನಾರತಿ ನೆರವೇರಿತು. ಆನಂತರ ಸಂಪ್ರದಾಯದ ಪ್ರಕಾರ‌ ತಳವಾರ ಸಮುದಾಯದ ನರಸಿಂಹ‌ರಾಜ ಅರಸ್‌ ಅವರು ಬನ್ನಿ ಮುಡಿದ ಬಾಳೆ ಕಂದಿಗೆ ನಮಿಸಿ ಖಡ್ಗದಿಂದ ಬನ್ನಿ ಕಡಿದರು. ನರಸಿಂಹರಾಜ ಅರಸ್‌ ಅವರು ಬನ್ನಿ ಕಡಿದ ತಕ್ಷಣ ನೆರೆದಿದ್ದ ನೂರಾರು ಜನರು ಜಯಘೋಷ ಕೂಗುತ್ತಾ ಮುಗಿ ಬಿದ್ದು ಪವಿತ್ರ ಮತ್ತು ಭಕ್ತಿಯ ಸಂಕೇತವಾದ ಬನ್ನಿಯ ಪತ್ರೆಯನ್ನು ತೆಗೆದುಕೊಂಡು ಭಕ್ತಿಭಾವ ಮೆರೆದರು.

29ವರ್ಷಗಳಿಂದ ಬನ್ನಿ ಅಂಬು ಕಡಿಯುವ ಸಂಪ್ರದಾಯ: ನರಸಿಂಹರಾಜ ಅರಸ್‌ ಅವರು ಕಳೆದ 29 ವರ್ಷಗಳಿಂದಲೂ ಬನ್ನಿ (ಅಂಬು)ಕಡೆಯುವ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದಾರೆ. ಮೂರು ದಿನಗಳಿಂದ ಉಪವಾಸ ವ್ರತ ಆಚರಿಸುವ ನರಸಿಂಹರಾಜ ಅರಸ್‌ ಅವರು ಆಯುಧಪೂಜೆ ದಿನ ಖಡ್ಗಕ್ಕೆ ಪೂಜೆ ಸಲ್ಲಿಸಿ ವಿಜಯ ದಶಮಿಯ ದಿನ ಬನ್ನಿ ಕಡಿಯಲು ಮುಡಿಪಾಗಿಡುತ್ತಾರೆ. ಬನ್ನಿ ಕಡಿದ ನಂತರ ಖಡ್ಗಕ್ಕೆ ಪೂಜೆ ಸಲ್ಲಿಸುವ ನರಸಂಹರಾಜ ಅರ‌ಸ್‌ ಅವರು ಹಾಸನಾಂಬಾ ದೇಗುಲದ ಬಾಗಿಲು ತೆರೆಯು ಮುನ್ನವೂ ಹಾಸನಾಂಬ ದೇಗುಲದ ವರಣದಲ್ಲಿ ಬಾಳೆ ಕಂದಿಗೆ ಬನ್ನಿ ಮುಡಿಸಿ ಪೂಜೆ ಸಲ್ಲಿಸಿ ಪಂಜಿನಾರತಿ ನಡೆದ ನಂತರ ಬನ್ನಿ ಕಡಿತ ತಕ್ಷಣವೇ ಹಾಸನಾಂಬೆ ದೇಗುಲದ ಬಾಗಿಲು ತೆರೆದು ಜಾತ್ರಾ ಮಹೋತ್ಸವ ಆರಂಭವಾಗುತ್ತದೆ.

ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥನೆ: ಬನ್ನಿ ಕಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನರಸಿಂಹರಾಜ ಅರಸ್‌ ಅವರು ದೇವರು ಉತ್ತಮ ಮಳೆ, ಬೆಳೆಮ ಸಮೃದ್ಧಿ ಕರುಣಿಸಲಿ, ಜನರಿಗೆ ಆರೋಗ್ಯ ಮತ್ತು ಸಂಪತ್ತು ಕೊಟ್ಟು ಕಾಪಾಡಲಿ ಪ್ರಾರ್ಥಿಸಿದ್ದೇನೆ. ವಂಶ ಪಾರಂಪರ್ಯವಾಗಿ ಬನ್ನಿ ಕಡಿಯುವ ಸಂಪ್ರದಾಯ ಆಚರಿಸಿಕೊಂಡು ಬರುತ್ತಿದ್ದೇನೆ. ಕಳೆದ 28 ವರ್ಷಗಳಿಂದ ಈ ಮಹಾನವಮಿ ಮಂಟಪದಲ್ಲಿ ವಿಜಯ ದಶಮಿ ಪೂಜಾ ಕಾರ್ಯವನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಿಕೊಂಡು ಬಂದಿದ್ದೇನೆ ಎಂದರು.

ನಾನು ನಡೆಸಿಕೊಂಡು ಬಂದಿರುವ ದೇವರ ಸೇವೆಗೆ ಪ್ರತಿಯಾಗಿ ನನಗೇನೂ ಪ್ರತಿಫ‌ಲ ಸಿಕ್ಕಿಲ್ಲ. ಸರ್ಕಾರದಿಂದ ನಿವೇಶನ ಕೊಡುವುದಾಗಿ ಜಿಲ್ಲಾಡಳಿತ ಹಲವು ವರ್ಷಗಳಿಂದ ಭರವಸೆ ನೀಡುತ್ತಲೇ ಬಂದಿದೆ. ದರೆ ಭರವಸೆ ಈಡೇರಿಲ್ಲ. ವಿಜಯ ದಶಮಿ ದಿನ ತಾಲೂಕು ಮುಜರಾಯಿ ಅಧಿಕಾರಿಗಳು ಹಾಜರಿರುತ್ತಿದ್ದರು. ಆದರೆ ಈ ವರ್ಷ ಅಧಿಕಾರಿಗಳು ಬಾರದೆ ಶಿರಸ್ತೇದಾರರು ಮಾತ್ರ ಬಂದಿದ್ದಾರೆ ಎಂದು ವಿಷಾದಿಸಿದರು.

Advertisement

ದೇವರ ಉತ್ಸವಕ್ಕೆ ಮಳೆ ಅಡ್ಡಿ: ನಗರದಲ್ಲಿ ಮಧ್ಯಾಹ್ನ 3.45 ಗಂಟೆಗೆ ಮಂಗಳವಾರ ಮಳೆ ಆರಂಭವಾಗಿದ್ದರಿಂದ ದೇವರ ಉತ್ಸವಕ್ಕೂ ಅಡಚಣೆಯಾಯಿತು. ಆದರೂ ಮಳೆ ವಿರಾಮ ಕೊಡುವವರೆಗೂ ಕಾದು ದೇವರ ಉತ್ಸವ ಮುಂದುವರಿಸಿದರು. ಮಹಾನವಮಿ ಮಂಟಪದಲ್ಲಿಯೂ ಬನ್ನಿ ಕಡಿಯುವ ಜಾಗವೂ ಕೆಸರುಮಯವಾಗಿತ್ತು.

ಮಹಾನವಮಿ ಮಂಟಪ ಸ್ವಚ್ಛತೆ ಕಾಪಾಡಿ: ಹಾಸನ ನಗರದಲ್ಲಿ ವಿಜಯ ದಶಮಿ ಅಚರಿಸುವ ಏಕೈಕ ಸ್ಥಳ ಮಹಾನವಮಿ ಮಂಟಪದ ಸ್ವಚ್ಛತೆಯ ಬಗ್ಗೆಯೂ ನಗರಸಭೆಯಾಗಲಿ, ಮುಜರಾಯಿ ಇಲಾಖೆಯಾಗಲಿ ಆಸಕ್ತಿ ತೋರುವುದಿಲ್ಲಿ ವಿಜಯ ದಶಮಿ ದಿನ ಮಾತ್ರ ಈ ಸ್ಥಳವನ್ನು ಸ್ವಚ್ಛಗೊಳಿಸುವುದು ಬಿಟ್ಟರೆ ವರ್ಷ ಪೂರ್ತಿ ಗಿಡಗಂಡಿ ಬೆಳೆದು ನಿಂತಿರುತ್ತದೆ. ನಗರದ ಮಧ್ಯ ಭಾಗದಲ್ಲಿರುವ ಮಹಾ ನವಮಿ ಮಂಟಪವನ್ನು ಸ್ವಚ್ಛಗೊಳಿಸಿ ಭಕ್ತಿ ಪ್ರಧಾನ ಸ್ಥಳವಾಗಿ ರೂಪಿಸಬೇಕು ಎಂದು ನರಸಂಹರಾಜ ಅರ‌ಸ್‌ ಮನವಿ ಮಾಡಿದರು.

ಆಸರೆ ಫೌಂಡೇಷನ್‌ನಿಂದ ಭಕ್ತರಿಗೆ ಪ್ರಸಾದ: ಮಹಾ ನವಮಿ ಮಂಟಪದಲ್ಲಿ ವಜಯದಶಮಿ ಆಚರಣೆ ವೇಳೆ ಭಕ್ತರಿಗೆ ಆಸರೆ ಫೌಂಡೇಶನ್‌ ವತಿಯಿಂದ ಪ್ರಸಾದ ಇತರಣೆ ಮಾಡಲಾಯಿತು. ಕಳೆದ ವರ್ಷದಿಂದ ಆಸರೆ ಫೌಂಡೇಷನ್‌ ಪ್ರಸಾದ ವಿತರಣೆ ಮಾಡುತ್ತಿದೆ. ಆಸರೆ ಫೌಂಡೇಶನ್‌ ಗೌರವಾಧ್ಯಕ್ಷ ಉದಯಕುಮಾರ್‌, ಅಧ್ಯಕ್ಷ ಗುರುಪ್ರಸಾದ್‌ ಕಾಮತ್‌, ಪ್ರಧಾನ ಕಾರ್ಯದರ್ಶಿ ಗಗನ್‌ಗಾಂಧಿ, ಖಜಾಂಚಿ ಎನ್‌.ಎಸ್‌. ನರಸಿಂಹಮೂರ್ತಿ, ಗಿರೀಶ್‌ ಟಾಕೋರ್‌, ಚಂದ್ರಶೇಖರ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next