Advertisement

ಡಾರ್ವಿನ್‌ ಪಠ್ಯವನ್ನು ಕೈಬಿಟ್ಟಿಲ್ಲ:ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಸ್ಪಷ್ಟನೆ!

09:42 PM Jun 21, 2023 | Team Udayavani |

ಪುಣೆ: ಎನ್‌ಸಿಇಆರ್‌ಟಿ ಪಠ್ಯ ಕ್ರಮದಿಂದ ಡಾರ್ವಿನ್‌ನ ವಿಕಾಸವಾದದ ಸಿದ್ಧಾಂತವನ್ನು ತೆಗೆಯಲಾಗಿಲ್ಲ. ಅಂಥ ನಿರ್ಧಾರವನ್ನೇ ಕೈಗೊಳ್ಳಲಾಗಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ಪುಣೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವು ದಿನಗಳಿಂದ ಎನ್‌ಸಿಇಆರ್‌ಟಿ ಪಠ್ಯ ಕ್ರಮದಿಂದ ಡಾರ್ವಿನ್‌ ವಿಕಾಸವಾದದ ಸಿದ್ಧಾಂತಕ್ಕೆ ಸಂಬಂಧಿಸಿದ ಪಠ್ಯವನ್ನು ತೆಗೆಯಲಾಗಿದೆ ಎಂಬ ವಾದ ಎದ್ದಿದೆ. ಅಂಥ ಬೆಳವಣಿಗೆಯೇ ನಡೆದಿಲ್ಲ.

Advertisement

ಕೊರೊನಾ ಅವಧಿಯಲ್ಲಿ ತಜ್ಞರ ಸಲಹೆಯಂತೆ ಪುನರಾವರ್ತನೆಗೊಂಡಿರುವ ಕೆಲವೊಂದು ಪಠ್ಯಗಳನ್ನು ಕೈಬಿಡುವ ಬಗ್ಗೆ ವಿಷಯ ಪರಿಣಿತರು ಸಲಹೆ ಮಾಡಿದ್ದರು. ಅದನ್ನು ಈಗ ಮತ್ತೆ ಅಳವಡಿಸಲಾಗಿದೆ. 8 ಮತ್ತು 9ನೇ ತರಗತಿಗಳ ಪಠ್ಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 10ನೇ ತರಗತಿಯ ಪಠ್ಯದಲ್ಲಿ ವಿಕಾಸವಾದಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ಹಿಂಪಡೆಯಲಾಗಿತ್ತು. 11 ಮತ್ತು 12ನೇ ತರಗತಿಯ ಪಠ್ಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next