Advertisement

ಅಭಿಮಾನಿಗಳಿಗಾಗಿ ಬ್ಯಾಟ್‌ ಹಿಡಿದ್ರು ದರ್ಶನ್‌

11:04 AM Apr 17, 2018 | Team Udayavani |

ಇತ್ತೀಚೆಗೆ ನಡೆದ ಕನ್ನಡ ಚಲನಚಿತ್ರ ಕ್ರಿಕೆಟ್‌ (ಕೆಸಿಸಿ) ಕಪ್‌ನಲ್ಲಿ ದರ್ಶನ್‌ ಆಡಲಿಲ್ಲ ಎಂಬ ಅವರ ಅಭಿಮಾನಿಗಳ ಕೊರಗನ್ನು ದರ್ಶನ್‌ ಕೊನೆಗೂ ತಣಿಸಿದ್ದಾರೆ. ಇತ್ತೀಚೆಗೆ ನಡೆದ ಡಿಪಿಎಲ್‌ನಲ್ಲಿ ದರ್ಶನ್‌ ಅವರು ಬ್ಯಾಟ್‌ ಹಿಡಿದು, ಕ್ರಿಕೆಟ್‌ ಆಡಿ ಅವರ ಅಭಿಮಾನಿಗಳ ಮನರಂಜಿಸಿದ್ದಾರೆ.

Advertisement

ದರ್ಶನ್‌ ಅವರ ಅಭಿಮಾನಿ ಬಳಗವಾದ “ಡಿ ಕಂಪೆನಿ’, ಮೊನ್ನೆ ಶನಿವಾರ ಮತ್ತು ಭಾನುವಾರದಂದು ಡಿಪಿಎಲ್‌ ಎಂಬ ಕ್ರಿಕೆಟ್‌ ಟೂರ್ನಿ ಆಯೋಜಿಸಿತ್ತು. ಡಿಪಿಎಲ್‌ ಎಂದರೇನು ಗೊತ್ತಾ? ಡಿ ಬ್ರದರ್ಸ್‌ ಪ್ರೀಮಿಯರ್‌ ಲೀಗ್‌ ಅಂತ. ಇಲ್ಲಿ ಡಿ ಬ್ರದರ್ಸ್‌ ಎಂದರೆ ದರ್ಶನ್‌ ಮತ್ತು ಅವರ ಸಹೋದರ ದಿನಕರ್‌ ಎಂದರ್ಥ.

ದರ್ಶನ್‌ ಮತ್ತು ದಿನಕರ್‌ ಅವರ ಹೆಸರಿನಲ್ಲಿ ನಡೆದ ಈ ಟೂರ್ನಿಯಲ್ಲಿ, ರಾಜ್ಯಾದ್ಯಂತ ಇರುವ ದರ್ಶನ್‌ ಅವರ ಅಭಿಮಾನಿಗಳು ಭಾಗವಹಿಸಿ ಕ್ರಿಕೆಟ್‌ ಆಡಿದರು. ಈ ಪೈಕಿ ಕೆಂಗೇರಿ ಟೀಮ್‌ನವರು ಕಪ್‌ ಗೆದ್ದುಕೊಂಡರು.

ಈ ಸಂದರ್ಭದಲ್ಲಿ ದರ್ಶನ್‌ ಮತ್ತು ದಿನಕರ್‌ ಸಹ ಕ್ರಿಕೆಟ್‌ ಆಡಿದ್ದು ವಿಶೇಷವಾಗಿತ್ತು. ಅವರ ಜೊತೆಗೆ ಸೃಜನ್‌ ಲೋಕೇಶ್‌, ಧರ್ಮ ಕೀರ್ತಿರಾಜ್‌, ಅರ್ಜುನ್‌ ಮುಂತಾದವರು ಈ ಟೂರ್ನಿಯಲ್ಲಿ ಭಾಗವಹಿಸಿ, ಅಭಿಮಾನಿಗಳನ್ನು ಖುಷಿಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next