Advertisement

ಕೃಷಿ ಇಲಾಖೆ ರಾಯಭಾರಿಯಾಗಿ ನಟ ದರ್ಶನ್ ಅಧಿಕಾರ ಸ್ವೀಕಾರ

04:45 PM Mar 05, 2021 | Team Udayavani |

ಬೆಂಗಳೂರು : ರಾಜ್ಯ ಕೃಷಿ ಇಲಾಖೆಯ ನೂತನ ರಾಯಭಾರಿಯಾಗಿ ಕನ್ನಡದ ಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಕ್ರವಾರ (ಮಾರ್ಚ್ 05, 2021) ಅಧಿಕಾರ ಸ್ವೀಕರಿಸಿದರು.

Advertisement

ಇಂದು (ಮಾರ್ಚ್ 5) ವಿಕಾಸಸೌಧದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ದರ್ಶನ್ ಅವರಿಗೆ ಹಸಿರು ಶಾಲ್ ಹೊದಿಸಿ  ಅಧಿಕೃತವಾಗಿ ಕೃಷಿ ಇಲಾಖೆಯ ನೂತನ ರಾಯಭಾರಿಯಾಗಿ ನೇಮಿಸಿದರು.

ನಟ ದರ್ಶನ್ ಅವರು ಸಂಭಾವನೆ ರಹಿತವಾಗಿ ರಾಯಭಾರಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ದರ್ಶನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಸಚಿವರ ಮಾತಿಗೆ ಮನ್ನಣೆ ನೀಡಿದ್ದ ಡಿ ಬಾಸ್ ರಾಯಭಾರಿಯಾಗಲು ಒಪ್ಪಿಗೆ ಸೂಚಿಸಿದ್ದರು.

ಕನ್ನಡ ಚಿತ್ರರಂಗದ ಮೇರು ನಟರಾಗಿರುವ ದರ್ಶನ್ ಪ್ರಾಣಿ ಪ್ರಿಯ ಕೂಡ ಹೌದು. ಮೈಸೂರು ಮೃಗಾಲಯದಲ್ಲಿ ಹುಲಿ ಸೇರಿದಂತೆ ಕೆಲವೊಂದು ವನ್ಯ ಜೀವಿಗಳನ್ನು ದತ್ತು ಪಡೆದಿರುವ ದಾಸ, ಅವುಗಳ ಪಾಲನೆ ಪೋಷಣೆಯ ನಿಗಾ ವಹಿಸಿದ್ದಾರೆ. ತಮ್ಮ ತೋಟದಲ್ಲಿ ಕುದುರೆ, ದನ, ಆಕಳುಗಳನ್ನು ಸಾಕುತ್ತಿದ್ದಾರೆ.

ಇನ್ನು ಸಾರಥಿಯ ಸಿನಿ ಜೀವನ ನೋಡೋದಾದರೆ, ಅವರು ನಟಿಸಿರುವ ‘ರಾಬರ್ಟ್’ ಸಿನಿಮಾ ಇದೇ ಮಾರ್ಚ್ 11 ರಂದು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next