Advertisement

Darshan; ಬಳ್ಳಾರಿ ಜೈಲಲ್ಲಿ ದರ್ಶನ್‌ ಹವಾ; ಆರೋಪಿ ನಟನನ್ನು ನೋಡಲು ಇತರ ಕೈದಿಗಳ ದುಂಬಾಲು

01:07 PM Aug 31, 2024 | Team Udayavani |

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ (Bellary Jail) ಸ್ಥಳಾಂತರವಾಗಿರುವ ನಟ, ಆರೋಪಿ ದರ್ಶನ್‌ (Darshan) ನೋಡಲು ಇತರ ಕೈದಿಗಳು ದುಂಬಾಲು ಬೀಳುತ್ತಿದ್ದಾರೆಂಬ ಸುದ್ದಿ ಹೊರಬಂದಿದೆ.

Advertisement

ದರ್ಶನ್ ಭೇಟಿಗೆ ಅವಕಾಶ ಕೊಡಬೇಕು ಎಂದು ಬಳ್ಳಾರಿ ಜೈಲಿನ ಇತರೇ ಕೈದಿಗಳು ಜೈಲು ಸಿಬ್ಬಂದಿಗೆ ಮನವಿ ಮಾಡುತ್ತಿದ್ದಾರೆ. ಬಳ್ಳಾರಿ ಜೈಲಿನಲ್ಲಿ 385 ಕ್ಕೂ ಹೆಚ್ಚು ಕೈದಿಗಳಿದ್ದಾರೆ.

ದರ್ಶನ್‌ ಇರುವ ಸೆಲ್ ಎಲ್ಲಿದೆ, ಅವರು ಹೇಗಿದ್ದಾರೆ ಎಂದು ಇತರ ಕೈದಿಗಳು ಪ್ರಶ್ನಿಸುತ್ತಿದ್ದಾರೆ. ನಮಗೂ ದರ್ಶನ್ ಭೇಟಿಗೆ ಅವಕಾಶ ನೀಡಿ ಎಂದು ಜೈಲು ಸಿಬ್ಬಂದಿ  ದುಂಬಾಲು ಬಿದ್ದಿದ್ದಾರೆ. ಊಟ, ಉಪಹಾರ ವಿತರಣೆಗೆ ಬಂದ ಜೈಲು ಸಿಬ್ಬಂದಿಗೆ ದರ್ಶನ್‌ ಬಗ್ಗೆ ವಿಚಾರಿಸುತ್ತಿದ್ದಾರೆ.

ಹೊರಗೆ ಹೇಗೂ ದರ್ಶನ್ ಭೇಟಿ ಮಾಡಲು ಆಗುವುದಿಲ್ಲ. ಇಲ್ಲಿ ಆದರೂ ಭೇಟಿ ಮಾಡಿಸಿ ಎಂದು ಮನವಿ ಮಾಡುತ್ತಿದ್ದಾರೆ. ಈಗಾಗಲೇ 60 ಹೆಚ್ಚು ಕೈದಿಗಳು ದರ್ಶನ ನೋಡುವ ತವಕದಿಂದ ಭೇಟಿಗೆ ಅವಕಾಶ ಕೊಡಿಸಲು ಮನವಿ ಮಾಡಿದ್ದಾರೆ.

Advertisement

ನಾವಿರುವ ಸೆಲ್ ಹತ್ತಿರವಾದರೂ ದರ್ಶನ್ ಅವರನ್ನು ಶಿಫ್ಟ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಪದೇ ಪದೇ ಕೈದಿಗಳ ಮನವಿ ಜೈಲು ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next