Advertisement

Bellary: ಬಳ್ಳಾರಿ ಜೈಲಿಗೆ ಬಂದ ಶಿಗ್ಲಿ‌ ಬಸ್ಯಾ; ದರ್ಶನ್‌ ಪರ ವಾದ ಮಾಡಲು ಸಿದ್ದ ಎಂದ ಬಸ್ಯಾ

02:51 PM Sep 09, 2024 | Team Udayavani |

ಬಳ್ಳಾರಿ: ನಟ ದರ್ಶನ್‌ ಅವರಿರುವ ಬಳ್ಳಾರಿ ಜೈಲಿಗೆ ಮಾಜಿ ಕಳ್ಳ ಶಿಗ್ಲಿ‌ ಬಸ್ಯಾ ಆಗಮಿಸಿದ್ದು, ದರ್ಶನ್ (Darshan) ಭೇಟಿಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.

Advertisement

ದರ್ಶನ್ ಪರ ಬ್ಯಾಟ್ ಬೀಸುತ್ತಿರುವ ಬಸ್ಯಾ, ದರ್ಶನ್ ಕೂಡ ಸಾಮಾನ್ಯ ಕೈದಿ. ಸಾಮಾನ್ಯ ಜನರ ಭೇಟಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಬಳ್ಳಾರಿ ಜೈಲಿನ ಸ್ಥಿತಿಗತಿ ಬಗ್ಗೆ ವಿವರಣೆ ನೀಡಲು ತನಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ದರ್ಶನ್ ಅಥವಾ ನ್ಯಾಯಲಯ ಒಪ್ಪಿದರೆ ದರ್ಶನ್ ಪರ ವಾದ ಮಾಡಲು ಸಿದ್ಧ ಎಂದಿರುವ ಶಿಗ್ಲಿ ಬಸ್ಯಾ, ಬಳ್ಳಾರಿ ಜೈಲಿನಲ್ಲಿಯೂ ಎಲ್ಲ‌ ಜೈಲಿನಲ್ಲಿ ಇದ್ದಂತೆ ವ್ಯವಸ್ಥೆಯಿದೆ. ದರ್ಶನ್ ಪ್ರಕರಣದಂತೆ ರಾಜ್ಯದಲ್ಲಿ ನಡೆದಿರುವ ವಿಐಪಿ ಪ್ರಕರಣಗಳು ತನಿಖೆಯಾಗಲಿ ಎಂದಿದ್ದಾರೆ.

ಶಿಗ್ಲಿ ಬಸ್ಯಾ ಅಲಿಯಾಸ್ ಬಸವರಾಜ ಗಡ್ಡಿ ರಾಜ್ಯದ ಹಲವು ಕಡೆ 200ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ, ಪೊಲೀಸರಿಂದ ಬಂಧಿಸಲ್ಪಟ್ಟು, ಅವುಗಳಿಗೆ ವಕೀಲರನ್ನು ನೇಮಕ ಮಾಡದೆ ತಾನೇ ನಿಬಾಯಿಸಿ ಗೆಲ್ಲುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next