Advertisement

Actor Darshan: ಜೈಲಿನ ಬಳಿ ಯಾರೂ ಬರಬೇಡಿ; ಫ್ಯಾನ್ಸ್‌ಗೆ ದರ್ಶನ್‌ ಮನವಿ

12:01 PM Jun 29, 2024 | Team Udayavani |

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರ ಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಅಭಿಮಾನಿಗಳು ಯಾರೂ ಜೈಲಿಗೆ ಬರಬೇಡಿ. ಜೈಲಿನ ನಿಯಮಗಳ ಪ್ರಕಾರ ಭೇಟಿ ಸಾಧ್ಯವಿಲ್ಲ. ಹೀಗಾಗಿ ಯಾರು ಕೂಡ ಜೈಲಿನ ಬಳಿ ಬರಬೇಡಿ ಎಂದು ಜೈಲಾಧಿ ಕಾರಿಗಳ ಮೂಲಕ ಅಭಿ‌ನಿಗ‌ಳಿಗೆ ಸಂದೇಶ ರವಾನಿಸಿದ್ದಾರೆ.

Advertisement

ನನ್ನ ಭೇಟಿಗೆ ಬಂದು ನೀವು ಕಾಯುವುದು, ನನ್ನ ಭೇಟಿಗೆ ಅವ ಕಾಶ ಸಿಗದೆ ನಿರಾಸೆಯಿಂದ ವಾಪಸ್‌ ಹೋಗು ವುದು ಬೇಡ. ಅದ ರಲ್ಲೂ ನಿನ್ನೆ ದಿವ್ಯಾಂಗ ಯುವತಿ ಸೌಮ್ಯಾ ಭೇಟಿಗೆ ಆಗಮಿಸಿದ್ದ ಬಗ್ಗೆ ಬೇಸರವಿದೆ ಎಂದು ಜೈಲಿನ ಅಧಿಕಾರಿಗಳ ಬಳಿ ದರ್ಶನ್‌ ಹೇಳಿಕೊಂಡಿದ್ದಾರೆ.

ದಿವ್ಯಾಂಗರು ಸೇರಿದಂತೆ ನೂರಾರು ಅಭಿ ಮಾನಿಗಳು ಜೈಲಿನ ಬಳಿ ಬಂದು ನಟನ ಭೇಟಿಗೆ ಅವಕಾಶ ನೀಡುವಂತೆ ಗೋಗರೆ ಯುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಸೂರ್ಯ ಕಾಂತ್‌ ಎಂಬಾತ ಸುಮಾರು 500 ಕಿಲೋ ಮೀಟರ್‌ ದೂರದಿಂದ ತನ್ನ ಮೂರು ಚಕ್ರದ ಸೈಕಲ್‌ನಲ್ಲೇ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಬಂದಿದ್ದಾನೆ. ಆದರೆ, ದರ್ಶನ್‌ ಭೇಟಿಗೆ ಆತನಿಗೆ ಅವಕಾಶ ನೀಡಲಿಲ್ಲ. ಇನ್ನು ಯುವತಿಯೊಬ್ಬಳು, ದರ್ಶನ್‌ ನಮ್ಮ ಕುಟುಂಬದವರು ಎಂದು ಕೇಳಿಕೊಂಡರು. ಆಕೆಗೂ ಅವಕಾಶ ನೀಡಿಲ್ಲ ಎಂದು ಜೈಲಿನ ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next