Advertisement

Actor Darshan: ನ್ಯಾಯ ಕೇಳಲು ಹೋಗಿದ್ದಕ್ಕೆ ನಾಯಿಗಳನ್ನು ಛೂ ಬಿಟ್ಟಿದ್ದ ದರ್ಶನ್‌!

10:16 PM Jun 13, 2024 | Team Udayavani |

ಚಾಮರಾಜನಗರ: ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ನಟ ದರ್ಶನ್‌ ಪರಿವಾರದ ಅನ್ಯಾಯ ಮತ್ತೆ ಮುನ್ನೆಲೆಗೆ ಬಂದಿದೆ. ಎತ್ತು ತಿವಿದು ಕಣ್ಣು, ಕೈ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿರುವ ದರ್ಶನ್‌ ತೋಟದ ಕಾರ್ಮಿಕನಿಗೆ ಸೂಕ್ತ ಚಿಕಿತ್ಸೆ ಕೊಡಿಸದೇ ದರ್ಶನ್‌ ಅನ್ಯಾಯ ವೆಸಗಿದ್ದಾರೆ. ನ್ಯಾಯ ಕೇಳಲು ಹೋದವರಿಗೆ ಸಾಕು ನಾಯಿಗಳನ್ನು ಛೂ ಬಿಟ್ಟು ದರ್ಶನ್‌ ಕಡೆಯವರು ಓಡಿಸಿದ್ದರಲ್ಲದೆ,  ಮಾತುಕತೆಗೆಂದು ಕರೆಸಿ ರೌಡಿಗಳಿಂದ ಬೆದರಿಕೆ ಹಾಕಿಸಿದ್ದಾರೆಂಬ ಆರೋಪವೂ ಕೇಳಿ ಬಂದಿದೆ.

Advertisement

ಹತ್ತು ವರ್ಷದ  ಹಿಂದೆ ದರ್ಶನ್‌ ತೋಟದಲ್ಲಿ ಎತ್ತುಗಳಿಗೆ ಲಾಳ ಕಟ್ಟಿಸುವಾಗ ತೋಟದ ಕಾರ್ಮಿಕ ಮಹೇಶನಿಗೆ ಎತ್ತು ತಿವಿದಿದ್ದರಿಂದ ಕೊಂಬು ಮಹೇಶನ ಕಣ್ಣಿನಿಂದ ತೂರಿ ತಲೆ ಬುರುಡೆಯ ಹೊರಗೆ ಬಂದಿದೆ.  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ದರ್ಶನ್‌ ಕಡೆಯವರು ಸ್ವಗ್ರಾಮಕ್ಕೆ  ತಂದು ಬಿಟ್ಟು ಹೋದವರು ಮತ್ತೆ ಬರಲಿಲ್ಲ. ದರ್ಶನ್‌ ಕಡೆಯಿಂದಲೂ ಪರಿಹಾರ ಸಿಗಲಿಲ್ಲ. ಒಂದು  ಕಣ್ಣು, ಎಡಗೈ ಸ್ವಾಧೀನ ಕಳೆದುಕೊಂಡಿದ್ದ  ಮಹೇಶ್‌ ದುಸ್ಥಿತಿ ನೋಡಲಾರದೆ ಚಿಕಿತ್ಸೆಗಾಗಿ  ಪರಿಹಾರ ನೀಡುವಂತೆ ಸಂಬಂಧಿಕರು ದರ್ಶನ್‌ ತೋಟಕ್ಕೆ ಹೋಗಿದ್ದ ವೇಳೆ ಸಾಕು ನಾಯಿಗಳನ್ನು ಛೂ ಬಿಟ್ಟು ದರ್ಶನ್‌ ಕಡೆಯವರು ಓಡಿಸಿದ್ದರು. ನಂತರ ಮೈಸೂರಿಗೆ ಮಾತುಕತೆಗೆಂದು ಕರೆಸಿ ರೌಡಿಗಳಿಂದ ಬೆದರಿಕೆ ಹಾಕಿ ಕಳಿಸಲಾಗಿತ್ತು ಎಂದು ಮಹೇಶನ ಸಂಬಂಧಿ ಮಹೇಶ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next