Advertisement

Renukaswamy Case ಜೈಲಿನ ಬಳಿ ಯಾರೂ ಬರಬೇಡಿ: ಅಭಿಮಾನಿಗಳಿಗೆ ದರ್ಶನ್‌ ಮನವಿ

11:20 PM Jun 28, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಅಭಿಮಾನಿಗಳು ಯಾರೂ ಜೈಲಿನ ನಿಯಮಗಳ ಪ್ರಕಾರ ಭೇಟಿ ಸಾಧ್ಯವಿಲ್ಲ.

Advertisement

ಹೀಗಾಗಿ ಯಾರು ಕೂಡ ಜೈಲಿನ ಬಳಿ ಬರಬೇಡಿ ಎಂದು ಜೈಲಿನ ಅಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ನನ್ನ ಭೇಟಿಗೆ ಬಂದು ನೀವು ಕಾಯುವುದು, ಅವಕಾಶ ಸಿಗದೆ ನಿರಾಸೆಯಿಂದ ವಾಪಸ್‌ ಹೋಗುವುದು ಬೇಡ. ಅದರಲ್ಲೂ ನಿನ್ನೆ ವಿಶೇಷ ಚೇತನ ಯುವತಿ ಸೌಮ್ಯಾ ಭೇಟಿಗೆ ಆಗಮಿಸಿದ್ದ ಬಗ್ಗೆ ಬೇಸರವಿದೆ ಎಂದು ಜೈಲಿನ ಅಧಿಕಾರಿಗಳ ಬಳಿ ದರ್ಶನ್‌ ಹೇಳಿಕೊಂಡಿದ್ದಾರೆ.

ವಿಶೇಷ ಚೇತನರು ಸೇರಿ ನೂರಾರು ಅಭಿಮಾನಿಗಳು ಜೈಲಿನ ಬಳಿ ಬಂದು ನಟನ ಭೇಟಿಗೆ ಅವಕಾಶ ನೀಡುವಂತೆ ಗೋಗರೆಯುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಸೂರ್ಯಕಾಂತ್‌ ಸುಮಾರು 500 ಕಿ.ಮೀ. ದೂರದಿಂದ ತನ್ನ ಮೂರು ಚಕ್ರದ ಸೈಕಲ್‌ನಲ್ಲೇ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಬಂದಿದ್ದಾನೆ. ಆದರೆ, ದರ್ಶನ್‌ ಭೇಟಿಗೆ ಆತನಿಗೆ ಅವಕಾಶ ನೀಡಲಿಲ್ಲ ಎನ್ನಲಾಗಿದೆ. ಇನ್ನು ಯುವತಿಯೊಬ್ಬಳು, ದರ್ಶನ್‌ ನಮ್ಮ ಕುಟುಂಬದವರು ಎಂದು ಕೇಳಿಕೊಂಡರೂ ಆಕೆಗೂ ಅವಕಾಶ ನೀಡಲಾಗಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next