Advertisement

ಅಪಾಯಕಾರಿ ತಿರುವು: ಎಚ್ಚರಿಕೆಯ ನಾಮಫಲಕವೂ ಇಲ್ಲ

10:53 PM Aug 12, 2019 | Team Udayavani |

ಬಸ್ರೂರು: ಕುಂದಾಪುರ – ಸಿದ್ದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಮೂಡ್ಲಕಟ್ಟೆಯ ತಿರುವು ಅಪಾಯಕಾರಿಯಾಗಿದ್ದು, ಅಪಘಾತಕ್ಕೆ ಆಹ್ವಾನ ನೀಡುವಂತಿದೆ.

Advertisement

ಬಸ್ರೂರಿನಿಂದ ಕುಂದಾಪುರಕ್ಕೆ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಮೂಡ್ಲಕಟ್ಟೆ ತಿರುವಿದ್ದು, ಇಲ್ಲಿ ಕನಿಷ್ಠ ಸೂಚನಾ ಫಲಕ ಕೂಡ ಇಲ್ಲ.

ಕುಂದಾಪುರಕ್ಕೆ ಹೋಗುವಾಗ ಎದುರಿನಿಂದ ಬರುವ ವಾಹನಗಳು ಕಾಣಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಆಪ‌ಘಾತಗಳು ನಡೆಯುವ ಸಂಭವಗಳಿದ್ದು ಸಂಬಂಧಿಸಿದ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.

ಕನಿಷ್ಠ ಪಕ್ಷ ರಸ್ತೆಯಲ್ಲಿ ವೇಗ ನಿಯಂತ್ರಕವನ್ನಾದೂ ಅಳವಡಿಸುವ ಮೂಲಕ ಸಂಭಾವ್ಯ ಅಪಘಾತವನ್ನು ತಡೆಯಬೇಕು ಎನ್ನುವುದು ಸಾರ್ವಜನಿಕರ ಅಹವಾಲು.

Advertisement

Udayavani is now on Telegram. Click here to join our channel and stay updated with the latest news.

Next