Advertisement

ಅಪಾಯದ ಭೀತಿಯಲ್ಲಿದ್ದ  ಟ್ರಾನ್ಸ್‌ಫಾರ್ಮರ್‌: ಸ್ಪಂದನೆ

07:55 AM Aug 24, 2017 | Harsha Rao |

ಶಿರ್ವ: ಆತ್ರಾಡಿ-ಶಿರ್ವ-ಬಜಪೆ ರಾಜ್ಯ ಹೆದ್ದಾರಿಯ ಶಿರ್ವ-ಕಾಡಿಕಂಬಳ ಬಳಿ ಮುಖ್ಯ ರಸ್ತೆಗೆ ವಾಲಿಕೊಂಡು ನಿಂತಿದ್ದು ಅಪಾಯದ ಭೀತಿಯಲ್ಲಿದ್ದ  ಹೈ-ಟೆನ್ಶನ್‌ವಿದ್ಯುತ್‌ ಕಂಬ ಮತ್ತು ಟ್ರಾನ್ಸ್‌ಫಾರ್ಮರ್‌ನ್ನು ಶಿರ್ವ ಮೆಸ್ಕಾಂ ಸೋಮವಾರ ಸರಿಪಡಿಸಿದೆ.

Advertisement

ರಸ್ತೆ ವಿಸ್ತರಣೆ ಸಂದರ್ಭದಲ್ಲಿ ವಿದ್ಯುತ್‌ ಕಂಬಗಳನ್ನು ಸ್ಥಳಾಂತರಗೊಳಿಸುವಲ್ಲಿ ಹೆದ್ದಾರಿ ಇಲಾಖೆಯ ವಿದ್ಯುತ್‌ ಗುತ್ತಿಗೆದಾರ ನಿರ್ಲಕ್ಷé ವಹಿಸಿದ್ದು ಹೈ-ಟೆನ್ಶನ್‌ ವಿದ್ಯುತ್‌ ಕಂಬ ಮತ್ತು ಟ್ರಾನ್ಸ್‌ಫಾರ್ಮರ್‌ ಮುಖ್ಯ ರಸ್ತೆಗೆ ವಾಲಿ ನಿಂತು ಅಪಾಯ ಎದುರಾಗಿತ್ತು.

ಉದಯವಾಣಿ ವರದಿಗೆ ಸ್ಪಂದನೆ
ವಿದ್ಯುತ್‌ ಕಂಬ ರಸ್ತೆಗೆ ವಾಲಿದ್ದು  ಅಪಾಯ ಸಂಭವಿಸುವ ಭೀತಿ ಎದುರಾಗಿದ್ದ ಬಗ್ಗೆ ಉದಯವಾಣಿ ಶನಿವಾರ ಸಚಿತ್ರ ವರದಿ ನೀಡಿತ್ತು. ವರದಿಗೆ ತತ್‌ಕ್ಷಣ ಸ್ಪಂದಿಸಿದ ಶಿರ್ವ ಮೆಸ್ಕಾಂ ಸೆಕ್ಷನ್‌ ಆಫೀಸರ್‌ ರಹಮತುಲ್ಲಾ  ನೇತೃತ್ವದಲ್ಲಿ ಸಿಬಂದಿ ಸೋಮವಾರವೇ ನಿಟ್ಟೆಯಿಂದ ಕ್ರೇನ್‌ ತರಿಸಿ ವಾಲಿ ನಿಂತ ಕಂಬಗಳನ್ನು ಸರಿಪಡಿಸಿದ್ದಾರೆ. ಉದಯವಾಣಿ ಕಾಳಜಿ ಮತ್ತು ಮೆಸ್ಕಾಂನ ಸೂಕ್ತ ಸ್ಪಂದನೆಗೆ ಶಿರ್ವದ ನಾಗರಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next