Advertisement

Dandeli: ಒಳಚರಂಡಿ ಜೋಡಣೆಗೆ ಅರ್ಜಿ ಸಲ್ಲಿಸುವಂತೆ ನಗರ ಸಭೆ ಪೌರಾಯುಕ್ತ ಆರ್.ಎಸ್. ಪವಾರ್ ಕರೆ

01:10 PM Dec 21, 2023 | Team Udayavani |

ದಾಂಡೇಲಿ: ನಗರ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯಿಂದ ಈಗಾಗಲೇ ಒಳಚರಂಡಿ ಯೋಜನೆಯು ಕಾರ್ಯಗತವಾಗಿದ್ದು, ಮನೆಗಳು, ಅಪಾರ್ಟ್ಮೆಂಟ್, ಫ್ಲಾಟ್, ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ, ಸರಕಾರಿ ಕಚೇರಿಗಳು ಹಾಗೂ ಇತರೆ ಕಟ್ಟಡಗಳಿಗೆ ಒಳಚರಂಡಿ ಜೋಡಣೆ ಮಾಡುವುದು ಅವಶ್ಯ.

Advertisement

ಈ ನಿಟ್ಟಿನಲ್ಲಿ ನಗರಸಭೆಯ ಕಚೇರಿಯಲ್ಲಿ ಅರ್ಜಿ ನಮೂನೆ ಲಭ್ಯವಿದ್ದು, ಅರ್ಜಿ ನಮೂನೆ ಪಡೆದು ನಗರಸಭೆ ನಿಗದಿಪಡಿಸಿರುವ ಶುಲ್ಕ ಭರಿಸಿ ಒಳಚರಂಡಿ ಜೋಡಣೆ ಪಡೆಯುವಂತೆ ದಾಂಡೇಲಿ ನಗರಸಭೆಯ ಪೌರಾಯುಕ್ತ ಆರ್.ಎಸ್.ಪವಾರ್ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

ಈ ಬಗ್ಗೆ ಡಿ.21ರ ಗುರುವಾರ ಅವರು ನಗರಸಭೆಯಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಗರಸಭೆಯ ಆರೋಗ್ಯ ವಿಭಾಗದ ಶುಭಂ ರಾಯ್ಕರ್ ಅವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದೆಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next