Advertisement

ದಾಂಡೇಲಿ : ನಗರದ ಗಾಂಧಿನಗರ, ಆಶ್ರಯ ಕಾಲೋನಿ ನಿವಾಸಿ ಹಾಗೂ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಮಿಕ ಅಸ್ಲಾಂ ಖಾಸೀಂ ಸಾಬ್ ಶೇಖ ಎಂಬಾತನು ಹೃದಯಾಘಾತಕ್ಕೊಳಗಾಗಿ ಇಂದು ಮೃತಪಟ್ಟಿದ್ದಾನೆ. ಮೃತನಿಗೆ 23 ವರ್ಷ ವಯಸ್ಸಾಗಿತ್ತು.

Advertisement

8 ವರ್ಷವಿರುವಾಗಲೆ ತಂದೆ, ತಾಯಿಯನ್ನು ಕಳೆದುಕೊಂಡಿದ್ದ ಈತ ತನ್ನ ಮಾವ ದಾದಾಪೀರ್ ನದೀಮುಲ್ಲಾ ಅವರ ಗಾಂಧಿನಗರದ ಆಶ್ರಯ ಕಾಲೋನಿಯಲ್ಲಿರುವ ಮನೆಯಲ್ಲಿ ವಾಸವಿದ್ದನು. ಜೆ.ಸಿ.ಬಿ ಆಪರೇಟರ್ ವೃತ್ತಿಯನ್ನು ನಿರ್ವಹಿಸುತ್ತಿದ್ದ ಈತ ಇಂದು ಬೆಳಿಗ್ಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಕೆಲಸಕ್ಕೆಂದು ತೆರಳುತ್ತಿದ್ದ ಸಮಯದಲ್ಲಿ ಮನೆಯಲ್ಲಿಯೇ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಆತನನ್ನು ಕರೆತರಲಾಗಿದೆ. ಅಷ್ಟೊತ್ತಿಗಾಗುವಲೆ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಮೃತ ಯುವಕನು ಮಾವ, ಅತ್ತೆ, ಓರ್ವ ಸಹದೋರಿ, ಓರ್ವ ಸಹೋದರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾನೆ.

ಇದನ್ನೂ ಓದಿ: Vaishnavi Gowda: ಸಿನಿಮಾ-ಸೀರಿಯಲ್‌ ಎಂಬ ಭೇದ-ಭಾವ ನನಗಿಲ್ಲ…: ‘ಸೀತಾರಾಮ’ ನಟಿಯ ಮಾತು

Advertisement

Udayavani is now on Telegram. Click here to join our channel and stay updated with the latest news.

Next