Advertisement

ದಾಂಡೇಲಿ: ದೇವಸ್ಥಾನದ ಹುಂಡಿ ಕಳ್ಳತನಕ್ಕೆ ಯತ್ನ

03:01 PM Nov 07, 2021 | Team Udayavani |

ದಾಂಡೇಲಿ: ಶನಿವಾರ ಮುಂಜಾನೆ ನಗರದ ಕೆಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಗಣಪತಿ ದೇವಸ್ಥಾನದಲ್ಲಿನ ಹುಂಡಿಯನ್ನು ಕಳ್ಳತನ ಮಾಡಲು ಕಳ್ಳ ವಿಫಲ ಯತ್ನ ಘಟನೆ ನಡೆದಿದೆ.

Advertisement

ಮುಂಜಾನೆ ಎಂದಿನಂತೆ ದೇವಸ್ಥಾನದಲ್ಲಿ ಸ್ವಚ್ಚತೆ ಮಾಡುವಾಗ ಹುಂಡಿ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅತ್ತ ಇತ್ತ ಹುಡುಕಿ ನೋಡಿದಾಗ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿಯು ದೇವಸ್ಥಾನದ ಹಿಂಬದಿಯ ಕಂಪೌಂಡ್ ಆಚೆಯ ಗಿಡಗಂಟಿಗಳಲ್ಲಿ ಮುಚ್ಚಿಟ್ಟಿರುವುದು ಕಂಡು ಬಂದಿದೆ. ಸ್ಥಳೀಯರು ದಾಂಡೇಲಿ ನಗರ ಪೊಲೀಸ್ ಠಾಣೆಗೆ  ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಚೆನ್ನೈನಲ್ಲಿ ಭಾರೀ ಮಳೆ, ಪ್ರವಾಹದ ಎಚ್ಚರಿಕೆ : ಜನಜೀವನ ಅಸ್ತವ್ಯಸ್ತ

ತನಿಖಾ ವಿಭಾಗದ ಪಿಎಸೈ ಕಿರಣ ಪಾಟೀಲ ಮತ್ತು ಪೊಲೀಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯ ಕುರಿತು ಸಿಸಿ ಟಿವಿಯ ಫೂಟೇಜ್ ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪಿಎಸೈ ಕಿರಣ ಪಾಟೀಲ್ ಅವರು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next