Advertisement

Dandatheertha; ಚಿತ್ರೀಕರಣದತ್ತ ಹೊಸಬರ ಕಾಮಿಡಿ-ಥ್ರಿಲ್ಲರ್‌ ಚಿತ್ರ

11:59 AM Dec 25, 2023 | Team Udayavani |

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ದಂಡ ತೀರ್ಥ’ ಸಿನಿಮಾದ ಟೈಟಲ್‌ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಪಸಲ್ಸ್‌ ಗೇಮ್‌ ಮೂಲಕ ಚಿತ್ರತಂಡ ವಿಭಿನ್ನವಾಗಿ “ದಂಡ ತೀರ್ಥ’ ಸಿನಿಮಾದ ಟೈಟಲ್‌ ಅನ್ನು ಅನಾವರಣಗೊಳಿಸಿತು.

Advertisement

ಇಲ್ಲಿಯವರೆಗೆ ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಹರಿಪ್ರಾಣ “ದಂಡ ತೀರ್ಥ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

“ಇದೊಂದು ಕಾಮಿಡಿ-ಥ್ರಿಲ್ಲರ್‌ ಶೈಲಿಯ ಸಿನಿಮಾ. ನಮ್ಮ ನಡುವೆಯೇ ನಡೆದಿರುವ ಕೆಲ ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು, ಅದಕ್ಕೆ ಒಂದಷ್ಟು ಕಾಲ್ಪನಿಕ ಅಂಶಗಳನ್ನು ಸೇರಿಸಿ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ. ಮೀಡಿಯಾದಲ್ಲಿ ನಡೆಯುವ ಸ್ಟಿಂಗ್‌ ಆಪರೇಷನ್‌ ಸುತ್ತ ಸಿನಿಮಾದ ಕಥೆ ನಡೆಯುತ್ತದೆ. ಜೊತೆಗೊಂದು ರಿವೇಂಜ್‌ ಸ್ಟೋರಿ ಕೂಡ ಸಿನಿಮಾದಲ್ಲಿದೆ.

“ದಂಡ’ ಎಂದರೆ ಶಿಕ್ಷೆ “ತೀರ್ಥ’ ಎಂದರೆ ಪ್ರಸಾದ ಅಥವಾ ಪ್ರತಿಫ‌ಲ ಎಂಬ ಅರ್ಥವಿದೆ. ಸಿನಿಮಾದ ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ “ದಂಡ ತೀರ್ಥ’ವನ್ನು ಟೈಟಲ್‌ ಆಗಿ ಇಟ್ಟುಕೊಂಡಿದ್ದೇವೆ’ ಎಂಬುದು ಸಿನಿಮಾದ ಟೈಟಲ್‌ ಮತ್ತು ಕಥಾಹಂದರದ ಬಗ್ಗೆ ಚಿತ್ರತಂಡದ ವಿವರಣೆ.

“ದಂಡ ತೀರ್ಥ’ ಸಿನಿಮಾದಲ್ಲಿ ಅವಿನಾಶ್‌, ರಜಿನಿಕಾಂತ್‌, ರೇಣುಕಾ ಪ್ರಸಾದ್‌, ಕುರಿ ಪ್ರತಾಪ್‌, ಚಂದ್ರಪ್ರಭ, ಪೂಜಾ ರಾಮಚಂದ್ರ, ಮಾನಸ ಗೌಡ, ಪುನೀತ್‌, ಬೇಬಿ ಶಾನ್ವಿ, ಜ್ಯೋತಿ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Advertisement

“ಪ್ರಾಣ ಪ್ರೊಡಕ್ಷನ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ದಂಡ ತೀರ್ಥ’ ಸಿನಿಮಾಕ್ಕೆ ಜಿ. ರಂಗಸ್ವಾಮಿ ಛಾಯಾಗ್ರಹಣವಿದೆ. ಸದ್ಯ ಟೈಟಲ್‌ ಬಿಡುಗಡೆ ಮಾಡಿರುವ “ದಂಡ ತೀರ್ಥ’ ಚಿತ್ರತಂಡ ಮುಂಬರಲಿರುವ ಜನವರಿ ತಿಂಗಳಿನಿಂದ ಬೆಂಗಳೂರು, ಮೈಸೂರು ಸುತ್ತಮುತ್ತ ಸಿನಿಮಾದ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next