Advertisement
ತಾಲೂಕಿನ ಕೆಲ ಗ್ರಾಮೀಣ ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆ ಆಗಿದ್ದರೆ ಮತ್ತೆ ಕೆಲವು ದಿನಗಳಲ್ಲಿ ಮಳೆ ಆಗದೆ ಬಿಸಿಲಿನ ವಾತಾ ವರಣವಿತ್ತು. ಸಂಜೆ ಹೊತ್ತಿಗೆ ವಿಪರೀತ ಮಳೆ, ಹಗಲಿನಲ್ಲಿ ಬಿಸಿಲ ತಾಪವಿತ್ತು. ಈ ರೀತಿ ಮಳೆ-ಬಿಸಿಲಿನ ಆಟಕ್ಕೆ ತೋಟಗಳಲ್ಲಿ ಅಡಿಕೆಗೆ ರೋಗ ತಗುಲಿದೆ. ಅಡಿಕೆ ಸಸಿಗಳು ಫಲ ಬಿಡಲು ಸಿದ್ಧವಾಗಿದ್ದವು. ಕೆಲವು ಕಡೆ ಹಿಂಗಾರ ಅರಳಿ ನಿಂತರೆ ಇನ್ನು ಕೆಲವು ಮಿಡಿ ಬಲಿತು ನಿಂತಿತ್ತು. ಹಿಂಗಾರ ಅರಳಿ ನಿಂತ ಹೊತ್ತಲ್ಲೇ ಮಳೆ ವ್ಯಾಪಕವಾಗಿ ಸುರಿದಿದ್ದರಿಂದ ಹಿಂಗಾರ ನಡುವೆ ನೀರು ನಿಂತು,ಹಗಲಲ್ಲಿ ಬಿಸಿಲಿನ ಧಗೆಗೆ ಹಿಂಗಾರ ಧರಾ ಶಾಹಿಯಾಗಿದೆ. ಜತೆಗೆ,ಮಿಡಿ ಅಡಿಕೆ ನಳ್ಳಿ ಬೀಳುತ್ತಿವೆ. ಈ ರೀತಿ ಎಳೆ ಅಡಿಕೆ ಉದುರುವುದು ಈಗಲೂ ನಿಂತಿಲ್ಲ. ಅರ ಣ್ಯದ ಅಂಚಿನ ಗ್ರಾಮಗಳಲ್ಲಿ ಸಂಜೆ ವೇಳೆಗೆ ಮೋಡ ಕವಿ ಯುತ್ತಿದೆ. ಆಗಾಗ ಹಗುರ ಮಳೆಯೂ ಬೀಳುತ್ತಿದೆ.
Related Articles
Advertisement
ಬೆಳೆಹಾನಿಯಿಂದಾಗಿ ತೋಟಗಳ ನಿರ್ವಹಣೆ ಸಮಸ್ಯೆ ಎದುರಾ ಗಿದ್ದು,ಅಗಾಧ ಸಾಲದ ಹೊರೆಯೂ ಎಲ್ಲ ಕೃಷಿಕರನ್ನು ಕಾಡು ತ್ತಿದೆ.ಎಕರೆಗಟ್ಟಲೆ ಕೃಷಿ ಹೊಂದಿರುವವರು ಮಾತ್ರ ವಲ್ಲದೆ, ಅತ್ಯಲ್ಪ ಪ್ರಮಾಣದ ತೋಟ ಇದ್ದವರನ್ನೂ ಈ ಸಮಸ್ಯೆ ಬಿಡದೆ ಕಾಡುತ್ತಿದೆ.
ಡೆಂಗ್ಯೂ ಭೀತಿ!ಒಂದು ಕಡೆ ಮಳೆ, ಇನ್ನೊಂದು ಕಡೆ ದಿನವಿಡೀ ಬಿಸಿಲು ಕಾಯುವ ವಾತಾವರಣ. ಈ ಹವಾಮಾನ ವೈಪ ರೀತ್ಯ ಮನುಷ್ಯರಿಗೂ ರೋಗಗಳನ್ನು ತರುತ್ತಿದೆ. ಹಠಾತ್ತನೆ ಮಳೆ ಬಂದರೆ ನೀರು ಸಂಗ್ರಹಗೊಂಡು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಮಳೆ ಹೋಗಿ ಬಿಸಿಲು ಬಿದ್ದೊಡನೆ ಸೊಳ್ಳೆ ಗಳು ಸಮೃದ್ಧವಾಗುತ್ತವೆ. ಈ ಮಳೆ – ಬಿಸಿಲಿನಾಟ ಜ್ವರ, ಡೆಂಗ್ಯೂ ಇತ್ಯಾದಿ ರೋಗ – ರುಜಿನಗಳಿಗೂ ಕಾರಣವಾಗಿ ಅಪಾಯ ತಂದೊಡ್ಡುವ ಭೀತಿ ಇದೆ. ಅಡಿಕೆ ಬೀಳ್ತಿದೆ
ಆಡಿಕೆ ತೋಟಗಳಲ್ಲಿ ನಳ್ಳಿ ಬೀಳುತ್ತಿದೆ.ಮಿಡಿ ಅಡಿಕೆ ಉದುರುವುದರಿಂದ ನಷ್ಟ. ಇದು ವ್ಯಾಪಕವಾಗಿ ಹರಡಿಲ್ಲ. ಹವಾ ಮಾನ ವ್ಯತ್ಯಾಸ ಮುಂದುವರೆದಲ್ಲಿ ಇನ್ನೂ ಕಷ್ಟ. ಮೋಡ ಕೂಡ ಈಗಿನ ಸ್ಥಿತಿಯಲ್ಲಿ ಫಸಲಿಗೆ ಹಾನಿಕಾರಕ.
– ಚಂದ್ರಕಾಂತ ಮಾತಾವು ಕೃಷಿಕ, ಬಳ್ಪ ಮಳೆ-ಬಿಸಿಲು
ಮಳೆ ಬಂದಿದ್ದು ಒಳ್ಳೆಯದು. ಮಿಡಿ ಕಟ್ಟುವ ಸಂದರ್ಭ ಮಳೆ ಬಂದು ಮತ್ತೆ ಬಿಸಿಲು ಬಂದರೆ ಒಳ್ಳೆಯದೆ. ಮಳೆ ಬಿಸಿಲಿನ ವಾತಾವರಣದಿಂದ ಸಣ್ಣ ಸಸಿಗಳ ಕಾಯಿಗಳಿಗೆ ಸಮಸ್ಯೆ.
– ಎಂ.ಡಿ. ವಿಜಯಕುಮಾರ
ಕೃಷಿಕ, ಮಡಪ್ಪಾಡಿ, ಸುಳ್ಯ. – ಬಾಲಕೃಷ್ಣ ಭೀಮಗುಳಿ