Advertisement

ದಲಿತ ಸಂಘಟನೆಗಳ ಪ್ರತಿಭಟನೆ ಹಿಂದಕ್ಕೆ

02:33 PM Dec 14, 2018 | Team Udayavani |

ಮಾನ್ವಿ: ತಾಲೂಕಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳ ಒಕ್ಕೂಟ ಹಾಗೂ ಮೇಜರ್‌ ಶಹನವಾಜ್‌ ಖಾನ್‌ ಹೈದರಾಬಾದ್‌ ಕರ್ನಾಟಕ ಸಂಘದ ವತಿಯಿಂದ ಪಟ್ಟಣದ ಶಾಸಕರ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಪ್ರಶಾಂತ ಭೇಟಿ ಬೇಡಿಕೆ ಈಡೇರಿಕೆಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಧರಣಿ ಹಿಂಪಡೆದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡ ಪ್ರಭುರಾಜ ಕೊಡ್ಲಿ, ವಸತಿ ನಿಲಯಗಳಿಗೆ ಮೂಲ ಸೌಕರ್ಯ, ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ, ಶುದ್ಧ ನೀರು ಸರಬರಾಜು, ಗ್ರಂಥಾಲಯ ವ್ಯವಸ್ಥೆ, ಪ್ರವಾಸ ಭತ್ಯೆ, ಶೌಚಾಲಯ, ಸ್ನಾನಗೃಹಗಳ ನಿರ್ಮಾಣ, ತಾಲೂಕಿನ ಜನ ಗುಳೆ ಹೋಗುವುದನ್ನು ತಪ್ಪಿಸಬೇಕು, ಉದ್ಯೋಗ ಖಾತ್ರಿ ಯೋಜನೆಯನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು, ತಾಲೂಕಿನ ಕರೆಗುಡ್ಡದ ಹತ್ತಿರ ನಡೆಯುತ್ತಿರುವ ಅಕ್ರಮ
ಗಣಿಗಾರಿಕೆಯನ್ನು ನಿಲ್ಲಿಸಬೇಕು, ವಿವಿಧ ಗ್ರಾಮ ಪಂಚಾಯತಿಗಳ 14ನೇ ಹಣಕಾಸು ಯೋಜನೆ ಅನುದಾನದ ದುರ್ಬಳಕೆ ತಡೆಯಬೇಕು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೊಟ್ಟೆ ಖರೀದಿಯಲ್ಲಿ ನಡೆಯುತ್ತಿರುವ ಅಕ್ರಮ ತನಿಖೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ನಂತರ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಶಾಂತ, ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳ ಸಮಸ್ಯೆಗಳನ್ನು ಸಂಪೂರ್ಣ ಬಗೆಹರಿಸಲಾಗುವುದು. ಇಲಾಖೆ ತಾಲೂಕು ಅಧಿಕಾರಿ ರವಿಯವರನ್ನು ಮುಂದುವರಿಸಲಾಗುವುದು. ಆಹಾರ ಪದಾರ್ಥ ಸರಬರಾಜು ಸ್ಥಗಿತಗೊಳಿಸಿದ ಸಂಬಂಧಿಸಿದ ಟೆಂಡರ್‌ದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕಡ್ಡಾಯವಾಗಿ ಶೌಚಾಲಯ, ಸ್ನಾನಗೃಹಗಳನ್ನು ನಿರ್ಮಿಸಲಾಗುವುದು ಎಂದರು.

ತಹಶೀಲ್ದಾರ್‌ ಅಮರೇಶ ಬಿರಾದಾರ ಮಾತನಾಡಿ, ನಿಯಮ ಬಾಹಿರವಾಗಿ ಇತರರಿಗೆ ನೀಡಿರುವ ಭೂಮಿಯನ್ನು ತನಿಖೆ ಮಾಡಿ ವಶಪಡಿಸಿಕೊಳ್ಳಲಾಗುವುದು. ಅಕ್ರಮ ಗಣಿಗಾರಿಕೆ ಬಗ್ಗೆ ಜಿಲ್ಲಾ ಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಗಿತಗೊಳಿಸಲಾಗುವುದು ಎಂದರು. ವಿವಿಧ ಗ್ರಾಮ ಪಂಚಾಯತಿಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಕಾಂತ ಶಿವಪುರೆ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದರು.

ಮೇಜರ್‌ ಶಹನವಾಜ್‌ ಖಾನ್‌ ಹೈದರಾಬಾದ್‌ ಕರ್ನಾಟಕ ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್‌. ಎಂ.ಶಾನವಾಜ್‌, ಸಂಚಾಲಕ ರಮೇಶ ಕರೇಗುಡ್ಡ, ಹೊಳೆಯಪ್ಪ ಉಟಕನೂರು, ಕರಿಯಪ್ಪ ನಕ್ಕುಂದಿ, ಯಲ್ಲಪ್ಪ, ಆಂಜನೇಯ, ಹುಲಿಗೆಪ್ಪ ಚಿಮ್ಲಾಪುರ, ಕೃಷ್ಣ ಜಿನೂರು, ಹನುಮಂತ ಅಮರಾವತಿ, ದೇವೇಂದ್ರಪ್ಪ, ಪರಶುರಾಮ ಸಂಗಾಪುರ, ಮೌನೇಶ ತಡಕಲ್‌, ಜಗದೀಶ ಪೋತ್ನಾಳ, ಮರಿಸ್ವಾಮಿ ಮಾನ್ವಿ, ಈರಣ್ಣ ಗವಿಗಟ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next