Advertisement

ಬಿಜೆಪಿ ಸಮಾಜ ಒಡೆಯುತ್ತಿದೆ: ದಲಿತ ಸಂಸದೆ ಫ‌ುಳೆ ಪಕ್ಷಕ್ಕೆ ರಾಜೀನಾಮೆ

03:46 PM Dec 06, 2018 | Team Udayavani |

ಲಕ್ನೋ : ವಿವಾದಾತ್ಮಕ ಹೇಳಿಕೆಗಳಿಗಾಗಿ ಚಿರಪರಿಚಿತರಾಗಿರುವ ಬಿಜೆಪಿ ದಲಿತ ಸಂಸದೆ ಸಾವಿತ್ರಿ ಬಾಯಿ ಫ‌ುಳೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. 

Advertisement

“ಭಾರತೀಯ ಜನತಾ ಪಕ್ಷ ಸಮಾಜವನ್ನು ಒಡೆಯಲು ಯತ್ನಿಸುತ್ತಿದೆ’ ಎಂದು ಫ‌ುಳೆ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

“ನಾನಿವತ್ತು ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ. ದೇಶದ ಸಂವಿಧಾನವನ್ನು ಮುಗಿಸಿ ಬಿಡುವ ಮತ್ತು ದಲಿತರು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕೊನೆಗೊಳಿಸುವ ಸಂಚು ಪಕ್ಷದಿಂದ ನಡೆಯುತ್ತಿದೆ’ ಎಂದು ಫ‌ುಳೆ ಆರೋಪಿಸಿದ್ದಾರೆ. 

ಇದೇ ಡಿ.23ರಂದು ಲಕ್ನೋ ದ ರಮಾಬಾಯಿ ಅಂಬೇಡ್ಕರ್‌ ಮೈದಾನದಲ್ಲಿ ನಡೆಯಲಿರುವ ರಾಲಿಯಲ್ಲಿ ತಾನು ಬಾಂಬ್‌ ಹಾಕಲಿದ್ದೇನೆ ಎಂದು ಫ‌ುಳೆ ಹೇಳಿದ್ದಾರೆ. 

ಬಹರೇಚ್‌ ಲೋಕಸಭಾ ಕ್ಷೇತ್ರದಿಂದ ಜಯಿಸಿ ಬಂದಿದ್ದ ಫ‌ುಳೆ ಅವರು ಈಚೆಗೆ, ದಲಿತರು ಮತ್ತು ಹಿಂದುಳಿದ ವರ್ಗದವರು ಮಂಗ ಮತ್ತು ರಾಕ್ಷಸರು; ಹನುಮಾನ್‌ ಓರ್ವ ದಲಿತ ಮತ್ತು ಮನುವಾದಿಗಳ ಗುಲಾಮ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿ ಮಾಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next