Advertisement

ದ.ಕ., ಉಡುಪಿಯಲ್ಲಿ ಇಂದೂ ರಜೆ

10:53 PM Aug 07, 2019 | Lakshmi GovindaRaj |

ಮಂಗಳೂರು/ಉಡುಪಿ: ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ, ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಬರೆ, ಮರಗಳು ಉರುಳಿದ್ದು, ಬಸ್ಸೊಂದು ಪಲ್ಟಿಯಾಗಿದೆ. ಶಿರಾಡಿ ಘಾಟಿ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ಮರ ಉರುಳಿ ಸಂಚಾರಕ್ಕೆ ಅಲ್ಪ ಕಾಲ ತಡೆಯಾಗಿತ್ತು. ಮಾಣಿ-ಮೈಸೂರು ರಸ್ತೆಯಲ್ಲಿ ತಾಳತ್‌ಮನೆ ಬಳಿ ಭೂಕುಸಿತ ಉಂಟಾಗಿತ್ತು.

Advertisement

ದಕ್ಷಿಣ ಕನ್ನಡದಲ್ಲಿ ಶಾಲಾ ಕಾಲೇಜುಗಳಿಗೆ ರಜೆಯನ್ನು ಗುರುವಾರಕ್ಕೂ ವಿಸ್ತರಿಸಲಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡುಗಳಲ್ಲಿ ಆ.8ರಂದು ಕೂಡ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಇದೇವೇಳೆ ಇಲಾಖೆಯು ಆ.9 ಮತ್ತು 10ರಂದು ಕರಾವಳಿ, ದ. ಒಳನಾಡುಗಳಲ್ಲಿ ಹವಾಮಾನ ಅಲರ್ಟ್‌ ಅನ್ನು ಆರೆಂಜ್‌ಗೆ, ಆ.11ರಂದು ಯೆಲ್ಲೋಗೆ ಇಳಿಸಿದೆ. ಉಡುಪಿ ಜಿಲ್ಲೆಯಲ್ಲಿ ಆಗಾಗ ವೇಗವಾದ ಗಾಳಿ ಬೀಸಿದ್ದು, ಹಲವೆಡೆ ಹಾನಿ ಎಸಗಿದೆ. ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next