Advertisement

ದಹಿ ಹಂಡಿಯಲ್ಲಿ ಭಾಗವಹಿಸಿದವ ಸಾವು; ಕಾರ್ಯಕ್ರಮ ಆಯೋಜಕರ ಮೇಲೆ ಕೇಸ್

04:23 PM Aug 23, 2022 | Team Udayavani |

ಮುಂಬಯಿ: ಮೊಸರು ಕುಡಿಕೆ ಉತ್ಸವದಲ್ಲಿ ಗಾಯಗೊಂಡು 24 ವರ್ಷದ ಯುವಕನೊಬ್ಬ ಸಾವನ್ನಪ್ಪಿದ ನಂತರ ಪೊಲೀಸರು ಕಾರ್ಯಕ್ರಮ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

Advertisement

ಶುಕ್ರವಾರ ವಿಲೇಪಾರ್ಲೆ ಪ್ರದೇಶದ ಬಾಮನವಾಡಿಯಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಆಚರಣೆ ವೇಳೆ ಶಿವ ಶಂಭೋ ಗೋವಿಂದ ಪಾಠಕ್ ಗುಂಪಿನ ಸದಸ್ಯ ಸಂದೇಶ್ ದಳವಿ ಅವರು ‘ಗೋವಿಂದಾಸ್’ (ದಹಿ ಹಂಡಿ ಭಾಗವಹಿಸುವವರು) ನಿರ್ಮಿಸಿದ ಮಾನವ ಪಿರಮಿಡ್‌ನಿಂದ ಬಿದ್ದು ತಲೆಗೆ ಗಂಭೀರ ಗಾಯಗಳಾಗಿದ್ದವು.

ಯುವಕ ಸೋಮವಾರ ರಾತ್ರಿ ನಾನಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವಿಲೆಪಾರ್ಲೆ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ದಳವಿ ಗಾಯಗೊಂಡ ನಂತರ, ಪೊಲೀಸರು ಕಾರ್ಯಕ್ರಮದ ಆಯೋಜಕರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next