Advertisement

ಅತ್ಯಾಚಾರಕ್ಕೆ ಸಹಕರಿಸದ 4 ವರ್ಷದ ಬಾಲಕಿಯನ್ನು ಕತ್ತು ಸೀಳಿ ಕೊಂದ ದುರುಳ!

10:24 AM Mar 14, 2021 | Team Udayavani |

ದಾದರ್ ಮತ್ತು ನಗರ ಹವೇಲಿ: ಅತ್ಯಾಚಾರ ಮಾಡಲು ಸಹಕರಿಸದ ನಾಲ್ಕು ವರ್ಷದ ಬಾಲಕಿಯನ್ನು ವ್ಯಕ್ತಿಯೋರ್ವ ಕತ್ತು ಸೀಳಿ ಕೊಂದ ಘಟನೆ ಕೇಂದ್ರಾಡಳಿತ ಪ್ರದೇಶವಾದ ದಾದರ್ ಮತ್ತು ನಗರ ಹವೇಲಿಯಲ್ಲಿ ನಡೆದಿದೆ.

Advertisement

ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, 30 ವರ್ಷ ಪ್ರಾಯದ ಆರೋಪಿ ಸಂತೋಷ್ ರತಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮಗಳ ವಿಚಾರದ ಬಗ್ಗೆ ತಿಳಿದ ಬಾಲಕಿಯ ತಂದೆಯೂ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ವೆಜ್‌ ಪಿಜ್ಜಾ ಬದಲು ನಾನ್‌-ವೆಜ್‌ ಪಿಜ್ಜಾ: 1 ಕೋಟಿ ರೂ. ಪರಿಹಾರಕ್ಕೆ ಮೊರೆ!

ನರೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಮನೆಯ ಹೊರಗೆ ಆಡುತ್ತಿದ್ದಳು. ಈ ವೇಳೆ ಆರೋಪಿ ರಜತ್ ಬಾಲಕಿಯನ್ನು ತನ್ನ ಅಪಾರ್ಟ್ ಮೆಂಟ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಆದರೆ ಬಾಲಕಿ ಅಳಲಾರಂಭಿಸಿದಾಗ ರಜತ್ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ದೇಹವನ್ನು ಚೀಲದಲ್ಲಿ ಕಟ್ಟಿ ತನ್ನ ಶೌಚಾಲಯದ ಕಿಟಕಿ ಒಡೆದು ಹೊರಗೆ ಬಿಸಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಕಾಣದಿರುವ ಕಾರಣ ಆಕೆಯ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಫ್ಲ್ಯಾಟ್ ಗಳಲ್ಲಿ ಹುಡುಕಾಟ ನಡೆಸಿದಾಗ ರಜತ್ ಸಂತೋಷ್ ನ ಮನೆಯಲ್ಲಿ ರಕ್ತದ ಕಲೆಗಳು ಕಳಡುಬಂದಿದ್ದವು. ನಂತರ ರಜತ್ ತಪ್ಪೊಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ: ಈ ರಾಶಿಯವರಿಗಿಂದು  ಸಾಂಸಾರಿಕವಾಗಿ ಆಪ್ತವರ್ಗದೊಳಗೆ ಮನಸ್ತಾಪ ಕಂಡುಬಂದೀತು

Advertisement

Udayavani is now on Telegram. Click here to join our channel and stay updated with the latest news.

Next