Advertisement

Sandalwood; ನನ್ನಪಾತ್ರ ತುಂಬಾ ಹೊಸದಾಗಿದೆ: ತೋತಾಪುರಿ 2 ಮೇಲೆ ಧನಂಜಯ್‌ ನಿರೀಕ್ಷೆ

10:28 AM Sep 28, 2023 | Team Udayavani |

ಡಾಲಿ ಧನಂಜಯ್‌ ಹಾಗೂ ಜಗ್ಗೇಶ್‌ ಮುಖ್ಯಭೂಮಿಕೆಯಲ್ಲಿರುವ “ತೋತಾಪುರಿ-2′ ಚಿತ್ರ ಇಂದು ತೆರೆಕಾಣುತ್ತಿದೆ. ಈ ಚಿತ್ರದ ಮೇಲೆ ಧನಂಜಯ್‌ ಅವರಿಗೆ ಸಾಕಷ್ಟು ನಿರೀಕ್ಷೆ ಇದೆ. ಇಂದು ತೆರೆಕಾಣುತ್ತಿರುವ ಈ ಚಿತ್ರದ ಬಗ್ಗೆ ಧನಂಜಯ್‌ ಮಾತನಾಡಿದ್ದಾರೆ. ಅದು ಅವರ ಮಾತುಗಳಲ್ಲೇ..

Advertisement

“ತೋತಾಪುರಿ-2′ ಸಿನಿಮಾ ಒಪ್ಪಿಕೊಳ್ಳಲು ಕಾರಣ ನಿರ್ದೇಶಕ ವಿಜಯ ಪ್ರಸಾದ್‌. ಅವರ ಬರಹ ಎಂದರೆ ನನಗೆ ತುಂಬಾ ಇಷ್ಟ. ಎಲ್ಲವನ್ನು ಒಂದೇ ಪಾತ್ರದಲ್ಲಿ ಕಟ್ಟಿಕೊಡುವ ಸಾಮರ್ಥ್ಯ ಅವರಿಗಿದೆ. ಇಲ್ಲೂ ಅಷ್ಟೇ ಸೆಂಟಿಮೆಂಟ್‌, ಕಾಮಿಡಿ, ಭಾವನೆಹಳ ಏರಿಳಿತದ ಪಯಣ ಎಲ್ಲವೂ ಇದೆ.

ನಾನಿಲ್ಲಿ ನಾರಾಯಣ್‌ ಪಿಳ್ಳೆ„ ಎಂಬ ಬಿಝಿನೆಸ್‌ ಮ್ಯಾನ್‌ ಆಗಿ ನಟಿಸಿದ್ದೇನೆ. ಪ್ರೀತಿ ಒಂದನ್ನು ಬಿಟ್ಟು ಜೀವನಲಿ ಎಲ್ಲವೂ ಇರಯವ ಪಾತ್ರ. ಪ್ರೀತಿಸಿದ ಹುಡುಗಿಯ ಹಿಂದೆ ಹೋಗುವ ಹಾಗೂ ಆಕೆ ಬೇಡ ಎಂದರೂ ಹೇಗಾದರೂ ಆಕೆಯನ್ನು ಒಲಿಸಿಕೊಳ್ಳಲು ಪ್ರಯತ್ನ ಪಡುವ ಪಾತ್ರ ನನ್ನದು. ಚಿತ್ರದಲ್ಲೊಂದು ಒಳ್ಳೆಯ ಸಂದೇಶ ಕೂಡಾ ಇದೆ. ಪ್ರೀತಿ ಪವಿತ್ರ. ಅದರ ಮಧ್ಯೆ ಜಾತಿ-ಧರ್ಮ ಅಡ್ಡಬರಬಾದು ಎಂಬುದು. ಚಿತ್ರದಲ್ಲಿ ವಿಭಿನ್ನಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ಆದರೆ, ಮುಖ್ಯವಾಗಿ ಒಬ್ಬ ಪ್ರೇಮಿಯಾಗಿ ನನ್ನ ಪಾತ್ರ ಹೈಲೈಟ್‌ ಆಗಿದ್ದು, ನಿರ್ದೇಶಕರು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ.

ತೋತಾಪುರಿ -2 ನಲ್ಲಿ ಎಲ್ಲಾ ಅಂಶಗಳು ಇವೆ. ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸವಿದೆ. ಅಮೆರಿಕಾದಿಂದ ಬಂದ ನಂತರ ನಾನು ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುತ್ತೇನೆ. ಚಿತ್ರದಲ್ಲಿ ಜಗ್ಗೇಶ್‌ ಅವರ ಕಾಮಿಡಿಯೂ ಹೈಲೈಟ್‌. ಚಿತ್ರದಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಈ ಚಿತ್ರದ ನಿರ್ಮಾಪಕ ಸುರೇಶ್‌ ಸಿನಿಮಾವನ್ನು ಪ್ಯಾಶನೇಟ್‌ ಆಗಿ ಮಾಡುತ್ತಾರೆ. ಅವರ ಆ ಸಿನಿಮಾ ಪ್ರೀತಿ ನನಗಿಷ್ಟ.

ಚಿತ್ರದಲ್ಲಿ ಸುಮನ್‌ ರಂಗನಾಥ್‌ ಸಿಸ್ಟರ್‌ ವಿಕ್ಟೋರಿಯಾ ಎಂಬ ಪಾತ್ರ ಮಾಡಿದ್ದಾರೆ. ಅವರ ಜೀವನದಲ್ಲಿ ಒಂದು ಘಟನೆ ನಡೆದ ಬಳಿಕ ಅವರೊಂದು ನಿರ್ಧಾರಕ್ಕೆ ಬಂದಿರುತ್ತಾರೆ. ಆ ನಿರ್ಧಾರ ಮತ್ತು ಘಟನೆ ಏನು ಎಂಬುದು ಸಸ್ಪೆನ್ಸ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next