Advertisement

ಡಿಕೆಶಿ ಅರೆಸ್ಟ್:‌ ಆರ್‌ ಎಂ ಎಲ್‌ ಆಸ್ಪತ್ರೆಯ ವಿಐಪಿ ವಾರ್ಡ್‌ ಗೆ ಮಾಜಿ ಸಚಿವ ಶಿಫ್ಟ್‌

09:43 AM Sep 05, 2019 | Team Udayavani |

ಹೊಸದಿಲ್ಲಿ:  ಅಕ್ರಮ ಹಣ ಸಾಗಾಟ ಆರೋಪದ ಮೇಲೆ ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಸಚಿವ ಡಿ ಕೆ ಶಿಕುಮಾರ್‌ ಅವರನ್ನು ಇಡಿ ಅಧಿಕಾರಿಗಳು ಮಂಗಳವಾರ ರಾತ್ರಿ ಬಂಧಿಸಿದ್ದು, ದೆಹಲಿಯ ಆರ್ ಎಂಎಲ್‌ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ದಾಖಲಿಸಿದ್ದಾರೆ. ಡಿಕೆಶಿ ಅವರಿಗೆ ಎದೆನೋವು, ರಕ್ತದೊತ್ತಡ ಏರುಪೇರು ಹಿನ್ನಲೆಯಲ್ಲಿ ಅವರನ್ನು ವಿಐಪಿ ವಾರ್ಡ್‌ ಗೆ ಸ್ಥಳಾಂತರಿಸಲಾಗಿದೆ.

Advertisement

ಡಿ ಕೆ ಶಿವಕುಮಾರ್‌ ಅವರ ಬಂಧನದ ಬೆನ್ನಲ್ಲೇ ರಾಮನಗರ, ಕನಕಪುರ ಸೇರಿದಂತೆ ರಾಜ್ಯದ ಹಲವು ಕಡೆ ಪ್ರತಿಭಟನೆಗಳು ನಡೆದವು. ಡಿಕೆಶಿ ಅವರ ಅಭಿಮಾನಿಗಳು ಕೇಂದ್ರ ಸರಕಾರ ಮತ್ತು ಬಿಜೆಪಿ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಹಲವೆಡೆ ಟೈರ್‌ ಗಳಿಗೆ ಬೆಂಕಿ ಹಚ್ಚಿದ ಘಟನೆಯೂ ವರದಿಯಾಗಿದೆ.

ಪ್ರತಿಭಟನೆಯ ಹಿನ್ನಲೆಯಲ್ಲಿ ರಾಮನಗರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next