Advertisement

Uroos: ಡಿ. 25ರಿಂದ 29ರ ವರೆಗೆ ಅಜಿಲಮೊಗರು ಉರೂಸ್‌

12:08 AM Dec 22, 2023 | Team Udayavani |

ಮಂಗಳೂರು: ಅಜಿಲಮೊಗರು ಜುಮಾ ಮಸೀದಿಯ ಸಂಸ್ಥಾಪಕ ಹಝ್ರತ್‌ ಸಯ್ಯಿದ್‌ ಬಾಬಾ ಫ‌ಕ್ರುದ್ದೀನ್‌ ವಲಿ (ಖ.ಸಿ.) ಸ್ಮರಣಾರ್ಥ 751ನೇ ಮಾಲಿದಾ ಉರೂಸ್‌ ಡಿ. 25ರಿಂದ 29ರ ವರೆಗೆ ನಡೆಯಲಿದೆ ಎಂದು ಮಸೀದಿಯ ಸಾವಿರ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ಎಂ.ಕೆ. ಸಿನಾನ್‌ ಸಖಾಫಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ದಕ್ಷಿಣ ಭಾರತದ ಪ್ರಮುಖ ಹಾಗೂ ಸರ್ವಧರ್ಮೀಯರು ಪಾಲ್ಗೊಳ್ಳುವ ಉರೂಸ್‌ ಇದಾಗಿದೆ. ಡಿ. 25ರಂದು ಮಗ್ರಿಬ್‌ ನಮಾಜ್‌ ಬಳಿಕ ಅಸ್ಸಯ್ಯಿದ್‌ ಜಅಫ‌ರ್‌ ಸ್ವಾದಿಕ್‌ ತಂšಳ್‌ ಕುಂಬೋಳ್‌ ನೇತೃತ್ವದಲ್ಲಿ ಜಲಾಲಿಯ್ನಾ ರಾತೀಬ್‌, ಡಿ. 26ರಂದು ಭಂಡಾರದ ಹರಕೆ ಪ್ರಾರಂಭ ಹಾಗೂ ಬುರ್ದಾ ಮಜ್ಲಿಸ್‌, ಸಯ್ಯಿದ್‌ ಮುಖಾ¤ರ್‌ ತಂšಳ್‌ ಕುಂಬೋಳ್‌ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಡಿ. 27ರಂದು ಬೆಳಗ್ಗೆ 8ರಿಂದ ಊರ ಪರವೂರವರ ಕೂಡುವಿಕೆಯಿಂದ ಮಾಲಿದಾ ಹರಕೆ ಆರಂಭವಾಗಲಿದೆ. ಮಗ್ರಿಬ್‌ ನಮಾಝ್ ಬಳಿಕ ಪೇರೋಡ್‌ ಅಬ್ದುರ್ರಹ್ಮಾನ್‌ ಸಖಾಫಿ ಅವರಿಂದ ಧಾರ್ಮಿಕ ಪ್ರವಚನ, ಡಿ. 28ರಂದು ಬೆಳಗ್ಗೆ 9ಕ್ಕೆ ಮಾಲಿದಾ ವಿತರಣೆ, ಸಾಮೂಹಿಕ ಪ್ರಾರ್ಥನೆ ಹಾಗೂ ಮಗ್ರಿಬ್‌ ನಮಾಝಿನ ಬಳಿಕ ಆಶಿಕ್‌ ದಾರಿಮಿ ಆಲಪ್ಪುಝ ಅವರ ಧಾರ್ಮಿಕ ಪ್ರವಚನ ನಡೆಯಲಿದೆ. ಡಿ. 29ರಂದು ಹಗಲು ಸಾಮೂಹಿಕ ಪ್ರಾರ್ಥನೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 5ರ ವರೆಗೆ ಕಂದೂರಿ ಊಟ ವಿತರಣೆಯಾಗಲಿದೆ ಎಂದು ವಿವರಿಸಿದರು.

5 ದಿನಗಳಲ್ಲಿ ಖ್ಯಾತ ಸಾದಾತುಗಳು ಹಾಗೂ ಧಾರ್ಮಿಕ ವಿದ್ವಾಂಸರಿಂದ ಝಿಯಾರತ್‌, ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಉರೂಸ್‌ನಲ್ಲಿ ಫ್ಯಾನ್ಸಿ ಟಾಯ್ಸಗಳ ವ್ಯಾಪಾರ, ಮನೋರಂಜನಾ ಕಾರ್ಯಕ್ರಮ ನಿಷೇಧಿಸಲಾಗಿದೆ ಎಂದು ಜಮಾಅತ್‌ ಅಧ್ಯಕ್ಷ ಹಾಗೂ ಕಮಿಟಿ ಸದಸ್ಯ ಹಾಜಿ ಪಿ.ಬಿ. ಅಬ್ದುಲ್‌ ಹಮೀದ್‌ ತಿಳಿಸಿದರು.

ಮಸೀದಿಯ ಧರ್ಮಗುರು ಪಿ.ಎಸ್‌. ತ್ವಾಹಾ ಸಅದಿ, ಇಬ್ರಾಹಿಂ ಜಿ. ಅಜಿಲಮೊಗರು, ಆದಂ ಕುಂಞಿ ನಡುಮೊಗರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next